ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ
ರವಿಕುಮಾರ್ ಗೌಡ ಅವರ ನೇತೃತ್ವದ
ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ
ಸಮಾಜ ಸೇವಕ ರವಿಕುಮಾರ್ ಗೌಡ ಅವರ ನೇತೃತ್ವದಲ್ಲಿ ಸಾಮೂಹಿಕ ಶ್ರೀನಿವಾಸ ಕಲ್ಯಾಣ ನಡೆಸುವುದರ ಬಗ್ಗೆ ಮಂಡ್ಯ ಜಿಲ್ಲೆಯ ಎಲ್ಲಾ ಹಿರಿಯ ಮುಖಂಡರುಗಳ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್ ಗೌಡ ಫೆಬ್ರವರಿ 10 ರಂದು ಮಂಡ್ಯ ಜಿಲ್ಲೆಯ ಸರ್ಕಾರಿ ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಶ್ರೀನಿವಾಸ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ ಇದರ ಉದ್ದೇಶ ಮಳೆ, ಬೆಳೆ, ಸಮೃದ್ಧಿಯಾಗಿ ಆಗಲಿ ರೈತಾಪಿ ವರ್ಗದ ಹಾಗೂ ಎಲ್ಲಾ ವರ್ಗದ ಪ್ರಜೆಗಳಿಗೆ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ವಿಶೇಷವೇನೆಂದರೆ ಶ್ರೀನಿವಾಸ ಸ್ವಾಮಿಯ ಮೂಲ ಸ್ಥಾನವಾದ ತಿರುಪತಿಯ ಪ್ರಧಾನ ಅರ್ಚಕರಾದ ರಮಣ ದೀಕ್ಷಿತ್ ಅವರೇ ಪುರೋಹಿತಿಕೆ ನಡೆಸಲಿದ್ದಾರೆ ಎಂದು ತಿಳಿಸಿದರು.
Comments
Post a Comment