ಬೆಂಗಳೂರು: ನಾರಾಯಣ e-ಟೆಕ್ನೋ & ಒಲಿಂಪಿಯಾಡ್ ಶಾಲೆಯ 13ನೇ ವಾರ್ಷಿಕೋತ್ಸವ ‘ಉತ್ಸವಂ’ ಭವ್ಯವಾಗಿ ಜರುಗಿ
ಬೆಂಗಳೂರು: ವಿದ್ಯಾರಣ್ಯಪುರದ ನಾರಾಯಣ e-ಟೆಕ್ನೋ ಮತ್ತು ಒಲಿಂಪಿಯಾಡ್ ಶಾಲೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ‘ಉತ್ಸವಂ’ ಶೀರ್ಷಿಕೆಯಲ್ಲಿ ಆಯೋಜಿಸಲ್ಪಟ್ಟ ವಾರ್ಷಿಕ ದಿನಾಚರಣೆ ನಗರದ ಅಂಬೇಡ್ಕರ್ ಭವನದಲ್ಲಿ ಭವ್ಯವಾಗಿ ನೆರವೇರಿತು. ನರ್ಸರಿ ಇಂದಾಗಿ ಹೈಸ್ಕೂಲ್ವರೆಗೆ ವಿವಿಧ ತರಗತಿಯ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ, ಸಾಂಸ್ಕೃತಿಕ ಕೌಶಲ್ಯ ಹಾಗೂ ಕ್ರೀಡಾ ವೈಭವಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳ ಪ್ರದರ್ಶನಗಳನ್ನು ಕಣ್ತುಂಬಿಕೊಂಡು ಪಾಲಕರು ಮತ್ತು ವಿಶೇಷ ಆಹ್ವಾನಿತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಮಂದಹಾಸದ ಚೈತನ್ಯ ತುಂಬಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಸ್ರೋ ವಿಜ್ಞಾನಿಗಳಾದ ಸುರೇಶ್ ಆರ್ ನಾಯಕ್ ರವರು ಮಕ್ಕಳ ವೈಜ್ಞಾನಿಕ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ಭವಿಷ್ಯದ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಕೊಡುಗೆ ಕುರಿತಾಗಿ ಪ್ರೇರಣಾದಾಯಕವಾಗಿ ಮಾತನಾಡಿದರು. “ಶಿಕ್ಷಣದ ಜೊತೆಗೆ ವಿಜ್ಞಾನ ಮನೋಭಾವ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ,” ಎಂದು ಅವರು ಮಕ್ಕಳನ್ನು ಉದ್ದೇಶಿಸಿ ಹೇಳಿದರು.
ಯಲಹಂಕ ಉಪವಿಭಾಗದ ಸಹ ಪೊಲೀಸ್ ಆಯುಕ್ತ ನರಸಿಂಹಮೂರ್ತಿ ಪಿ ರವರು ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರಪ್ರೇಮದ ಅಗತ್ಯತೆಯನ್ನು ಸವಿಸ್ತಾರವಾಗಿ ವಿವರಿಸಿದರು. “ಶಿಕ್ಷಣ ಕೇವಲ ಪಠ್ಯಪುಸ್ತಕಗಳಲ್ಲಿ ಸೀಮಿತವಾಗಿರದೆ, ಒಳ್ಳೆಯ ನಾಗರಿಕರಾಗಿ ಬೆಳೆಸುವ ಮೌಲ್ಯಗಳನ್ನು ಕೂಡ ನೀಡಬೇಕು,” ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಸನ್ಮಾನಿತ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ವಿ. ನಾಗರಾಜು, ಡಾ. ಪವನ್ ಕೆ. ಸಾಂಬ ಹಾಗೂ ಶಿವಕುಮಾರ್ ರೆಡ್ಡಿ ಹಾಗೂ ಪ್ರಶಾಂತಿ ಗೌಡ ರವರು ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಹುಮ್ಮಸ್ಸು, ಶಿಕ್ಷಕರ ಪರಿಶ್ರಮ ಹಾಗೂ ಸಂಸ್ಥೆಯ ಕಾರ್ಯಪದ್ಧತಿಯನ್ನು ಮೆಚ್ಚಿದರು.
ಅದೇ ಸಂದರ್ಭದಲ್ಲಿ ನಾರಾಯಣ ಗ್ರೂಪ್ನ ಎಲ್ಲಾ ಮುಖ್ಯಸ್ಥರು ಹಾಗೂ ವಲಯ ಸಂಯೋಜಕರು ವಿಶೇಷ ಆಹ್ವಾನಿತರಾಗಿ ಹಾಜರಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಭವ್ಯತೆ ತುಂಬಿದರು.
ಕಾರ್ಯಕ್ರಮವು ಸಂಗೀತ, ನೃತ್ಯ, ನಾಟಕ, ಕ್ರೀಡೆ ಮತ್ತು ಬಹುಮಾನ ವಿತರಣೆಗಳೊಂದಿಗೆ ಸಡಗರಭರಿತವಾಗಿ ಜರುಗಿ, ಶಾಲೆಯ 13ನೇ ವರ್ಷದ ಸಾಧನೆಗೆ ನೂತನ ಮೆರುಗನ್ನು ನೀಡಿತು.
Comments
Post a Comment