Posts

Showing posts from April, 2018

"ಕುಚ್ ಈಸ್ ತರ"

Image
 "ಕುಚ್ ಈಸ್ ತರ"  ಮ್ಯೂಸಿಕ್ ಆಲ್ಬಂನ  ಚಿತ್ರೀಕರಣ  ಬೆಂಗಳೂರಿನಲ್ಲಿ              ಏಕ್ ನಂಬರ್ ಪ್ರೊಡಕ್ಷನ್ನ "ಕುಚ್ ಈಸ್ ತರ"  ಮ್ಯೂಸಿಕ್ ಆಲ್ಬಂನ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಿತು ಈ ಚಿತ್ರದ ನಾಯಕನಾಗಿ ಬಾಲಿವುಡ್ ನ ಬಿಗ್ ಬಾಸ್ ಖ್ಯಾತಿಯ ಅಜೀಜ್ ಖಾನ್ ನಾಯಕಿಯಾಗಿ ಕನ್ನಡದ ಹುಡುಗಿ  ಸಾಹಿರ್  ಅಪ್ಸ ನಟಿಸುತ್ತಿದ್ದು ಈ ಮ್ಯೂಸಿಕ್ ಆಲ್ಬಂನಲ್ಲಿ ಹೊಸ ದಂಪತಿಗಳ  ರೊಮ್ಯಾಂಟಿಕ್ ಲವ್ ಸೆಂಟಿಮೆಂಟ್ ಗಳು ಒಳಗೊಂಡಿದೆ ಎಂದು ನಿರ್ದೇಶಕ ಸದಾಬ್ ಸಿದ್ದಿಕ್ ತಿಳಿಸಿದರು.

ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..

Image
ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..      ಬೆಂಗಳೂರು   ಏಪ್ರಿಲ್   19:   ನಗರದ   ಜಯಮಹಲ್   ಬಿಬಿಎಂಪಿ  ಕಚೇರಿಯಲ್ಲಿ   ತನ್ನ   ತಾಯಿ  ಪತ್ನಿ ಯೊಂದಿಗೆ  ನಾಮಪತ್ರ   ಸಲ್ಲಿಸದ   ಹೆಬ್ಬಾಳ  ವಿಧಾನಸಭಾ   ಕ್ಷೇತ್ರದ   ಬಿಜೆಪಿ   ಅಭ್ಯರ್ಥಿ       ವೈ.  ಎ.  ನಾರಾಯಣಸ್ವಾಮಿ   ಅವರು   ಗೆಲುವಿನ    ವಿಶ್ವಾಸ ವ್ಯಕ್ತ ಪಡಿಸಿದರು .      ಹೆಬ್ಬಾಳ   ಚುನಾವಣೆಯಲ್ಲಿ   ಹಣದಿಂದ ಮತದಾರರ  ಮನವೊಲಿಸಲು   ಸಾಧ್ಯವಿಲ್ಲ .   ತಮ್ಮ   ಹಣ   ಬಲದಿಂದಲೇ  ಎಲ್ಲವನ್ನು  ಸಾಧಿಸುವ   ಉತ್ಸಾಹದಲ್ಲಿರುವ  ಅಭ್ಯರ್ಥಿಗಳು  ಸೋಲಿನ   ರುಚಿಯನ್ನು  ಕಾಣಲಿದ್ದಾರೆ .   ಕಳೆದ   ಎರಡು  ವರ್ಷಗಳಲ್ಲಿ ನಾನು   ಪ್ರತಿನಿತ್ಯ   ಜನರ   ಸೇವೆಯನ್ನು  ಮಾಡಿದ್ದೇನೆ .  ಆ   ಜನರು   ನಮ್ಮ   ಸೇವೆಗೆ  ಚುನಾವಣೆಯಲ್ಲಿ   ಉತ್ತರ  ನೀಡಲಿದ್ದಾರೆ  ಎಂದರು .                           ವೈ. ಎ. ನಾರಾಯಣಸ್ವಾಮಿರವರ   ತಾಯಿ  ಪಾಪಮ್ಮ   ಮಾತನಾಡಿ ,   ನನ್ನ ಮಗ   ಜನರ ಸೇವೆ   ಸಲ್ಲಿಸಿದ್ದು   ಬಹುಮತದಿಂದ  ಗೆಲ್ಲಲಿದ್ದಾರೆ .  ಅಲ್ಲದೆ ,   ಮಂತ್ರಿಯಾಗಿ   ಇನ್ನೂ  ಹೆಚ್ಚಿನ     ಸೇವೆ  ಸಲ್ಲಿಸಲಿದ್ದಾರೆ ಎಂದರು .    ಇದಕ್ಕೂ   ಮುನ್ನ   ರಾಧಾಕೃಷ್ಣ   ಮಂದಿರದಿಂದ  ನಡೆದ   ಬೃಹತ್  ಮೆರವಣಿಗೆಯಲ್ಲಿ   ಕೇಂದ್ರ ಸಚಿವ   ಸದಾನಂದಗೌಡ  ಸೇರಿದಂತೆ    ಸಾವಿರಾರು   ಜನರು     ಭಾ

75 ಅಭ್ಯರ್ಥಿಗಳ ಎಂಇಪಿ 2ನೇ ಪಟ್ಟಿ ಬಿಡುಗಡೆ

Image
75 ಅಭ್ಯರ್ಥಿಗಳ ಎಂಇಪಿ 2ನೇ ಪಟ್ಟಿ ಬಿಡುಗಡೆ            ಬೆಂಗಳೂರು ಏ.18-   ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಇಂದು ೨ನೇ ಪಟ್ಟಿ ಬಿಡುಗಡೆ ಮಾಡಿದೆ.                 ನಗರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ 10 ಜಿಲ್ಲೆಗಳ 75 ಅಭ್ಯರ್ಥಿಗಳ 2ನೇ  ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡಿದರು.                       ಬಳಿಕ ಮಾತನಾಡಿದ ಅವರು,  224 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ 35ರಿಂದ ೪೦ ಸ್ಥಾನ ನೀಡಲಾಗಿದೆ ಇದರ ಜೊತೆಗೆ ರೈತರಿಗೆ ೮ ಕ್ಷೇತ್ರಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.               ನಮ್ಮ ಸಮೀಕ್ಷೆ ಪ್ರಕಾರ 100ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜು ಮಾಡಲಾಗಿತ್ತು ಆದರೆ ಕಾರ್ಯಕರ್ತರ ಉತ್ಸಾಹ ಹೆಚ್ಚಾಗುತ್ತಿದೆ ರಾಜ್ಯದ ಮಹಿಳೆಯರು ಎಂಇಪಿ ಪರ ಒಲವು ತೋರುತ್ತಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎಂಇಪಿ 150 ಸ್ಥಾನ ಗಳಿಸಿ ಯಾರ ಹಂಗು ಇಲ್ಲದೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.          ಪಕ್ಷದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕೆಲಸ ಮಾಡಿದವರಿಗೆ ಟಿಕೆಟ್ ಕೊಡುವ ಸಂಪ್ರದಾಯ, ನೀತಿ ನಮ್ಮದು. ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಬಳಿಕೆ ಶಾಸಕರು ಸಭೆ ಸೇರಿ ಸಿಎಂ ಆಯ್ಕೆ ಮಾಡುತ್ತಾರೆ.     2-3ದಿನಗಳಲ್

ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Image
ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ      ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಮುಂಬೈ ಮತ್ತು ಇತರ ಕಡೆಗಳಲ್ಲಿ ಚಲನಚಿತ್ರೋತ್ಸವಗಳು ಅತ್ಯಂತ ಹೆಚ್ಚು ವೀಕ್ಷಕರನ್ನು ತಲುಪಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇರ್ಶಕರು, ನಟರು, ಲೇಖಕರು ಹಲವು ರಾಷ್ಟ್ರಗಳಿಂದ ಚಿಂತನೆಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಈ ಚಲನಚಿತ್ರೋತ್ಸವಗಳು ವೇದಿಕೆಯಾಗಿವೆ.  ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ, ಚಿತ್ರೋದ್ಯಮದ ವಿದ್ಯಾರ್ಥಿಗಳಿಗೆ ತೋರಿಸಿಕೊಡಲು ಮತ್ತು ಹೇಗೆ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಈ ಚಿತ್ರಗಳ ಮೂಲಕ ತಿಳಿಸಿಕೊಡಲಿದೆ. ಈ ಉತ್ಸವವು ಒಂದು ವೇದಿಕೆ ನಿರ್ಮಾಣ ಮಾಡಿಕೊಡಲಿದೆ.        ಬೆಂಗಳೂರಿನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮೂರು ದಿನಗಳ ಕಾಲ ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಸುಮಾರು ೭೦ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದೇ ಸಂದ‘ರ್ದಲ್ಲಿ ಚಿತ್ರರಂಗದ ಪರಿಣಿತರು ಹಾಗೂ ಚಲನಚಿತ್ರ ತಯಾರಕರೊಂದಿಗೆ ಸಂವಾದಗಳು ಸಹ ನಡೆಯಲಿವೆ. ಈ ವೇದಿಕೆಯು ಚಲನಚಿತ್ರರಂಗದ ವಿದ್ಯಾರ್ಥಿಗಳಿಗೆ ಅತ್ಯಂತ ದೊಡ್ಡ ಅ‘್ಯಯನದ ವೇದಿಕೆಯಾಗಿ ಒದಗಿಬರಲಿದೆ ಮ

ಮೆಜೆಸ್ಟಿಕ್ ನಲ್ಲಿ ರಿಯಾಯಿತಿ ದರದ ನೀತಿ ವಸ್ತ್ರ ಭಂಡಾರ ಮಾಳಿಗೆ

Image
ರಾಜಸ್ತಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೀತಿ ವಸ್ತ್ರ ಭಂಡಾರ ಮಾಳಿಗೆ      ರಾಜಸ್ಥಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೂತನವಾಗಿ ನೀತಿ ವಸ್ತ್ರ ಭಂಡಾರ ಮಳಿಗೆಗೆ ಸಂಘದ ಯೋಜನಾ ವ್ಯವಸ್ಥಾಪಕ ಕೈಲಾಸ್ ಜೈನ್ ಚಾಲನೆ ನೀಡಿದರು.        ನಂತರ ಮಾತನಾಡಿದ ಅವರು ಈ ಮಳಿಗೆಯಲ್ಲಿ 100 ರೂ ಗಳಿಗೆ ಯಾವುದೇ ರೀತಿಯ 3 ಬಟ್ಟೆಗಳನ್ನು ಖರೀದಿಸಬಹುದು ಈ ಮಳಿಗೆಯಲ್ಲಿ ಮಕ್ಕಳಿಂದ ವೃದ್ಧರವರೆಗಿನ ಎಲ್ಲ ವಯಸ್ಸಿನವರಿಗೆ ಬಟ್ಟೆಗಳು ದೊರೆಯಲಿವೆ, ಬಡವರಿಗೆ ಪ್ರಯೋಜನವಾಗಲೆಂದು ಈ ಮಳಿಗೆ ತೆರೆಯಲಾಗಿದು ಈ ಮಳಿಗೆಯಲ್ಲಿ ಉಪಯೋಗಿಸಿದ ಬಟ್ಟೆಗಳನ್ನು ಮರು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ, ಆದ್ದರಿಂದ ಶ್ರೀಮಂತರು ಬಟ್ಟೆಗಳನ್ನು ಉಪಯೋಗಿಸಿ ಬಿಸಾಡುವ ಬದಲು ನೀತಿ ವಸ್ತ್ರ ಭಂಡಾರಕ್ಕೆ ದಾನವಾಗಿ ನೀಡಬಹುದು, ಈ ಮಳಿಗೆ ಯಶಸ್ವಿಯಾದರೆ ನಗರದಲ್ಲಿ ಮತ್ತಷ್ಟು ಮಳಿಗೆಗಳನ್ನು ತೆರೆಯಲಾಗುವುದು.           ನಮ್ಮ ಸಂಘದ ವತಿಯಿಂದ ಇಪ್ಪತ್ತಕ್ಕೂ ಹೆಚ್ಚು  ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಉಚಿತ ಪುಸ್ತಕಗಳು, ಬಟ್ಟೆಗಳು, ಆಟದ ಉಪಕರಣಗಳು, ಕಂಪ್ಯೂಟರ್ ಮತ್ತು ಜಲ ಶುದ್ಧೀಕರಣವನ್ನು ವಿತರಿಸುತ್ತಿದ್ದೇವೆ. ಇದರಿಂದ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗೂ  ಎಲ್ಲ ಸಮುದಾಯದ ಉಪಯೋಗಕ್ಕಾಗಿ ಬಳಸಲು 6 ಮೋಕ್ಷ ವಾಹಿನಿ (ಶ್ರದ್ಧಾಂಜಲಿ ವಾಹನ) ಗಳನ್ನು ಉಚಿತವಾಗಿ ನೀಡಲಾಗಿದೆ ಅದರ ಎಲ್ಲ ಖರ್ಚು ವೆ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

Image
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ  ಕರ್ನಾಟಕ ವಿಧಾನಸಭಾ  ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ  ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ 72 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಯಾರ್ಯಾರಿಗೆ ಟಿಕೆಟ್ ಲಭಿಸಿದೆ ಎಂಬ ವಿವರ ಈ ಕೆಳಕಂಡಂತಿದೆ         ಕ್ಷೇತ್ರ                                       ಹೆಸರು                            1)ನಿಪ್ಪಾಣಿ -                         ಶಶಿಕಲಾ ಜೋಲೆ 2)ಅಥಣಿ -                           ಲಕ್ಷ್ಮಣ ಸವದಿ      3)ಕಾಗವಾಡ -                       ಭರಮಗೌಡ ಎಚ್ ಕಾಗೆ 4)ಕುಡಚಿ -                            ಪಿ, ರಾಜೀವ್  5)ರಾಯಭಾಗ  -                    ದುರ್ಯೋಧನ ಐಹೊಳೆ 6)ಹುಕ್ಕೇರಿ -                           ಉಮೇಶ್ ಕತ್ತಿ  7)ಅರಬಾವಿ -                        ಬಾಲಚಂದ್ರ ಜಾರಕಿಹೊಳಿ   8)ಬೆಳಗಾಂ (ರೂರಲ್) -         ಸಂಜಯ್ ಪಾಟೀಲ್ 9)ಬೈಲಹೊಂಗಲ -                  ಡಾ ವಿಶ್ವನಾಥ ಪಾಟೀಲ್ 10)ಸೌದತ್ತಿ ಎಲ್ಲಮ್ಮ -             ಆನಂದ್ ವಿಶ್ವನಾಥ್ ಮಹಾಮನಿ 11)ಮುಧೋಳ -                    ಗೋವಿಂದ ಕಾರಜೋಳ 12)ಮುದ್ದೆ ಬಿಲ್ಲಾಳ -                ಎ, ಎಸ್ ಪಾಟೀಲ್ ನಡಹಳ್ಳಿ 13)ಬಬಲೇಶ್ವರ -                    ವಿಜುಗೌಡ ಪಾಟೀಲ್ 14

ಗಾಂಜಾಂ ಸುಂದರವಾದ ಜ್ಯುವೆಲ್ರಿ ಪ್ರದರ್ಶನ

Image
ಗಾಂಜಾಂ ಸುಂದರವಾದ ಜ್ಯುವೆಲ್ರಿ ಪ್ರದರ್ಶನ         ಬೆಂಗಳೂರು, ಏಪ್ರಿಲ್ 6, 2018: ಭಾರತೀಯ ಲಕ್ಷುರಿ ಆಭರಣ ಗ್ಯಾಂಜಮ್  ಬೆಂಗಳೂರಿನ ಬಸವನಗುಡಿಯ ಗಂಜಮ್ ಮಂಟಪದಲ್ಲಿ ಅಕ್ಷಯ್ ತಡಿಗೆಯ ಮುಂಬರುವ ಉತ್ಸವವನ್ನು 2018 ರ ಎಪ್ರಿಲ್ 6 ರಿಂದ 8 ರವರೆಗೆ ನಡೆಯಲಿರುವ ಉತ್ಸವ ಆಭರಣ ಪ್ರದರ್ಶನವನ್ನು ಪ್ರದರ್ಶಿಸಿತು.     ವೈಶಖ್ನ ಪ್ರಕಾಶಮಾನವಾದ ಅರ್ಧದ ಮೂರನೆಯ ದಿನ ಅಕ್ಷಯ್ ತಡಿಗೆ ವರ್ಷದ ನಾಲ್ಕು ಪವಿತ್ರ ದಿನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಉದಾಹರಣೆ  ದೀಪಾವಳಿ, ದಸರಾ ಮತ್ತು ಗುಡಿ ಪದ್ವಾ, ಅಕ್ಷಯ್ ತಡಿಗೆ ಮೀಸಲಿಡಲಾಗಿದೆ  ಚಿನ್ನ, ಬೆಳ್ಳಿ ಮತ್ತು ಇತರ ಆಸ್ತಿಗಳನ್ನು ಖರೀದಿಸುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ, ಈ ದಿನ ಹೊಸ ಸಾಹಸಗಳನ್ನು ಪ್ರಾರಂಭಿಸಲು ಮತ್ತು ಹೊಸ ಖರೀದಿ ಮಾಡುವ ಮಂಗಳಕರವೆಂದು ಪರಿಗಣಿಸಲಾಗಿದೆ. ಸಂಪ್ರದಾಯಗಳ ಪ್ರಕಾರ, ಈ ದಿನ ಮತ್ತು ಈ ದಿನದಂದು ಖರೀದಿಸಿದ ಯಾವುದೇ ಉಪಕ್ರಮಗಳು ಉತ್ತಮ ಅದೃಷ್ಟವನ್ನು ತರಲು ಪರಿಗಣಿಸಲಾಗಿದೆ.      ಬ್ರಾಂಡ್ ಸಾಂಪ್ರದಾಯಿಕವಾಗಿ ಸಮಕಾಲೀನ ಕ್ಲಾಸಿಕ್ನಿಂದ ಹಿಡಿದು ಅದರ ಸೂಕ್ಷ್ಮ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಿತು. ಗಾಂಜಾಮ್ನ ಪ್ರತಿಯೊಂದು ಸಂಗ್ರಹವು ಬ್ರಾಂಡ್ನ ಪರಿಶುದ್ಧತೆ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ಪ್ರತಿಫಲಿಸುತ್ತದೆ. ಗ್ಯಾಂಜಮ್ನ ಪ್ರತಿ ಆಭರಣದ ತುಣುಕು ಎಫ್ ಬಣ್ಣ ವಿವಿಎಸ್ ವಜ್ರಗಳ ಬಳಕೆಯಿಂದ ತಯಾರಿಸಲ್

GANJAM HOSTED A FINE JEWELLERY EXHIBITION

Image
GANJAM HOSTED A FINE JEWELLERY EXHIBITION FOR PRE ‘AKSHAY TADIGE’​​ AT GANJAM MANTAPA      Bangalore, 6 th  April 2018:  Ganjam, the Indian luxury jewellery  brand exhibited a fine jewelry exhibition to celebrate the upcoming  festival of Akshay Tadige at Ganjam Mantapa at Bull Temple  Road, Basavanagudi in Bangalore between 6th - 8th April 2018.        Akshay Tadige, the third day of the bright half of Vaishakh, is  considered one of the four most sacred days of the year. Like  Diwali, Dussera and Gudi Padva, Akshay Tadige is reserved for  buying gold, silver and other assets. Being one of the most sacred  days according to the Hindu calendar, this day is also considered  auspicious for starting new ventures and making new purchases.  As per traditions, any initiatives made on this day and anything  bought on this day is considered to bring good fortune.    The brand showcased its fine jewelry collections that ranged from  traditional to contemporary classic. E

ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತಿಲ್ಲ : ವಿ. ಸೋಮಣ್ಣ

Image
ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತಿಲ್ಲ :   ವಿ. ಸೋಮಣ್ಣ      ಮಾಜಿ ಸಚಿವ ವಿ ಸೋಮಣ್ಣ ನವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.        ತುರ್ತು ಪತ್ರಿಕಾಗೋಷ್ಠಿ ನಡೆಸಿದ ವಿ. ಸೋಮಣ್ಣನವರು ಖಾಸಗಿ ಮಾಧ್ಯಮದಲ್ಲಿ ಪ್ರಕಟವಾದ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ ವರದಿಯನ್ನು ತಳ್ಳಿ ಹಾಕಿದ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ ನಮ್ಮ ನಾಯಕರಾದ ಸನ್ಮಾನ್ಯ ಅನಂತಕುಮಾರ್ ಹಾಗೂ ಯಡಿಯೂರಪ್ಪನವರು ತೀರ್ಮಾನದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ.           ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಮಾತಿಲ್ಲ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾನು ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ

Image
ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ   ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಾಗಪುರ ಡಾ||ರಾಜ್ ಕುಮಾರ್ ಸಂಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಹತ್ತು ಮಹಿಳೆಯರಿಗೆ "ಸ್ಪಂದನ ಸ್ತ್ರೀ" ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟನೆಯನ್ನು ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣರವರು ಮತ್ತು ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ಮತ್ತು ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ವಿಶಾಲಾಕ್ಷೀ ಎಂ.ಶಿವರಾಜು ಮತ್ತು ಸಾಲು ಮರದ ತಿಮ್ಮಕ್ಕರವರು ಉದ್ಘಾಟನೆ ನೇರವೆರಿಸಿದರು. ತದನಂತರ ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ವಿಶ್ವದ ಎಲ್ಲ ರಾಷ್ಟಗಳಲ್ಲಿ ಅಚರಿಸಲಾಗುತ್ತಿದೆ. ಸ್ವಾತಂತ್ಯ್ರ ಪೂರ್ವದಲ್ಲಿ ಭಾರತದಲ್ಲಿ ಮಹಿಳೆಯರು ಆವಿದ್ಯಾವಂತರಾಗಿದ್ದರು ಅದರೆ ಇಂದು ಮಹಿಳೆಯರು ವಿದ್ಯಾವಂತರಾಗಿ ಪುರುಷರಿಗೆ ಸರಿಸಮಾನವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿರವರು ವಿಶ್ವವೆ ಮೆಚ್ಚಿದ ನಾಯಕಿಯಾಗಿದ್ದರು ,ಶ್ರೀಲಂಕಾ ಪ್ರಧಾನಿ ಬಂಡಾರೆ ಸಿರಿಮಾಮೋ ಮತ್ತು ಬೇನಜೀರ್ ಭುಟ್ಟೋ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರತೃಪ್ರಭ ಮತ್ತು ಪೋಲೀಸ್ ಮಹಾ ನಿರ್ದಶಕರಾದ ನೀಲಮಣಿರಾಜು ರವರು ಮಹಿಳಾ ಲೋಕದ