Posts

Showing posts with the label Bpnnews24x7

Unisys Announces Winners of the 10th Year of Annual Cloud 20/20™ Contest

Image
Unisys Announces Winners of the 10th Year of Annual Cloud 20/20™ Contest  Leading Indian project-based contest provides platform for students to innovate and grow with trending disruptive technologies BENGALURU and BLUE BELL, Pa.,  April 5, 2019 –  Unisys Corporation   today announced the winners of the 10th annual Unisys Cloud 20/20™ contest, one of India's largest and most popular annual student innovation programs. This year’s contest featured more than 270 colleges and over 300 projects, as students were challenged to think outside the box and develop innovative ideas.        The project titled  Vesa  – Blockchain Based Supply Chain Management  by Sarang Parikh,  Amith  K  K , Swathi R and Deeptha  M of  the Nitte Meenakshi  Institute of Technology, Bengaluru was picked as the winner.  Eniyanilavan  R, Hemachandiran  S,  Eathindhar  M and  Gautham  A of Sri Manakula Vinayagar  Engineering College, Puducherry College earned second place for their project titl

ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ

Image
ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ         ಶಿವ ಗರ್ಜನ್ ಯುವಸೇನೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವದ ಅಂಗವಾಗಿ ಮೆರವಣಿಗೆ ಯಾತ್ರೆಗೆ ಶ್ರೀ ಶ್ರೀ ಮಂಜುನಾಥ ಸ್ವಾಮೀಜಿ ಅವರು ಸದಾಶಿವನಗರದಲ್ಲಿರುವ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಚಾಲನೆ ನೀಡಿದರು.      ಸದಾಶಿವ ನಗರದಿಂದ ಹೊರಟ ಮೆರವಣಿಗೆ ವಯ್ಯಾಲಿಕಾವಲ್ ಮಾರ್ಗವಾಗಿ ಮಲ್ಲೇಶ್ವರಂ ರಾಜಬೀದಿಗಳಲ್ಲಿ ಸಾಗಿ ಕಾಡು ಮಲ್ಲೇಶ್ವರ ದೇವಸ್ಥಾನ ತಲುಪಿತು.         ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರವರ ಆಡಳಿತಾವಧಿಯ ಉಡುಪುಗಳನ್ನು ಮಕ್ಕಳು, ಮಹಿಳೆಯರು  ದರಿಸಿದು ನೋಡುಗರಿಗೆ ವಿಶೇಷವಾಗಿತ್ತು.          ಈ ಸಂದರ್ಭದಲ್ಲಿ  ಪ್ರವೀಣ್ ಮಾಣೆ, ಲಯನ್ ಮನೋಜ್ ಕುಮಾರ್, ಶ್ರೀಧರ್, ಶಿವಕುಮಾರ್ ಪವಾರ್, ವಿಕ್ರಂ ಸಿಂಧ್ಯಾ ಹಾಗೂ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

Image
ಮಾಸ್ಟರ್ಸ್ ಆಫ್ ಮ್ಯೂಸಿಕ್   ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರ  ಬೆಂಗಳೂರು:     ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗರುಡಾ ಮಾಲ್  ಇನಾಕ್ಸ್ ನಲ್ಲಿ  ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು .                    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಮಾತನಾಡಿ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರವನ್ನು  ಮಾಸ್ಟರ್ಸ್ ಆಫ್ ಮ್ಯೂಸಿಕ್ ವತಿಯಿಂದ ದಿನಾಂಕ 10/02/2019ರಂದು ಕೆ.ಜಿ ರಸ್ತೆಯ ಶಿಕ್ಷಕ ಸದನದಲ್ಲಿ     ಆಯೋಜಿಸಲಾಗಿದೆ.          ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ  ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.          ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ  ಬುದ್ಧಿಶಕ್ತಿ  ಹೆಚ್ಚಿಸಲು ಉಪಯುಕ್ತವಾಗಿದೆ. ಮಕ್ಕಳು, ವಯಸ್ಕರು, ಯುವಜನರು ಸೇರಿದಂತೆ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು  ಎಂದು ಹೇಳಿದರು.                 ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ವಾಡ್ಕರ್ ನಿತಿನ್ (ಅಜಿವಾಸನ್ ಸಿಇಒ) ,  ದರ್ಮಿಲ್ ಶಾ  ಹಾಗ

ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

Image
ಫ್ರಾಂಕ್ಲಿನ್, ಮಧುಲಿಕ ಶ್ರೀರಾಮ್‍ಗೆ ``ಫೇಸ್ ಆಫ್ ಪೀಪಲ್’’ ಕಿರೀಟ ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ     ಬೆಂಗಳೂರು, ಸೆಪ್ಟಂಬರ್ 11, 2018: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಯುವಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ  ಪೀಪಲ್ ಬೆಂಗಳೂರಿನ  ನಾಗರಭಾವಿಯಲ್ಲಿರುವ ತನ್ನ ಸ್ಟೋರ್‍ನಲ್ಲಿ ನಗರದ ಅತಿದೊಡ್ಡ ಮಾಡೆಲ್ ಶೋಧ ಕಾರ್ಯಕ್ರಮವಾದ ``ಫೇಸ್ ಆಫ್ ಪೀಪಲ್’’ ಅನ್ನು ಆರಂಭ ಮಾಡಿದೆ. ಈ ರೂಪದರ್ಶಿಗಳ ಶೋಧ ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಜನರು ಮತ್ತು ರೂಪದರ್ಶಿಗಳು ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ವಿಜೇತರಾದ ಸೇಂಟ್ ಜೋಸೆಫ್ ಸ್ವಾಯತ್ತ ಕಾಲೇಜಿನ ಫ್ರಾಂಕ್ಲಿನ್ ವೈ ಮತ್ತು ಜೈನ್ ಕಾಲೇಜಿನ ಮಧುಲಿಕ ಶ್ರೀರಾಮ್ ಅವರಿಗೆ  ಸ್ಯಾಂಡಲ್‍ವುಡ್‍ನ ಖ್ಯಾತ ತಾರೆ ರಾಗಿಣಿ ದ್ವಿವೇದಿ ಅವರು ಕಿರೀಟ ತೊಡಿಸಿದರು.       ಇದಲ್ಲದೇ, ಇಬ್ಬರಿಗೂ ತಲಾ 20,000 ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು. ಈ ಇಬ್ಬರೂ ರೂಪದರ್ಶಿಗಳಿಗೆ ಪೀಪಲ್‍ನ ಡಿಜಿಟಲ್ ಜಾಹೀರಾತು ಮತ್ತು ಹೊರಾಂಗಣ ಹೋರ್ಡಿಂಗ್‍ಗಳಲ್ಲಿ ಜಾಹೀರಾತಿನಲ್ಲಿ ರೂಪದರ್ಶಿಗಳಾಗುವ ಅವಕಾಶವೂ ಸಿಕ್ಕಿದೆ.         ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಪೀಪಲ್‍ನ ಬ್ರ್ಯಾಂಡ್ ಮುಖ್ಯಸ್ಥರಾದ ರಶ್ಮಿ ಶುಕ್ಲಾ ಅವರು, ``ವಿಭಿನ್ನ ಬಗೆಯ ಸ್ಟೈಲ್‍ಗಳು ಮತ್ತು ಹೊಸ ಹೊಸ ವಿನ್ಯ

2018-19 ರ ಬಿಬಿಎಂಪಿ ಮೇಯರ್ ಪಟ್ಟ ?

Image
2018-19 ರ ಬಿಬಿಎಂಪಿ ಮೇಯರ್ ಪಟ್ಟ ? ಮೇಯರ್ ಸ್ಥಾನದ ಮೇಲೆ ಜೆಡಿಎಸ್ ಕಣ್ಣು   ನಮಗೊಂದು ಬಾರಿ ಪಟ್ಟ ಕಟ್ಟಿ               ಬೆಂಗಳೂರು: ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.       ಸದ್ಯ ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ. ಆದರೆ ಮೇಯರ್ ಸ್ಥಾನಕ್ಕೆ ಜಯನಗರ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅಥವಾ ಶಾಂತಿನಗರ ವಾರ್ಡ್‍ನ ಸೌಮ್ಯ ಶಿವಕುಮಾರ್ ಪೈಕಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.           ಇದರ ಬೆನ್ನಲ್ಲೇ ವಿಪಕ್ಷ ಬಿಜೆಪಿಯೂ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಅಗತ್ಯ ಸಂಖ್ಯಾಬಲ ಹೊಂದಿಲ್ಲವಾದರೂ ತಮ್ಮ ಪಕ್ಷದ ಮಹಿಳೆ ಸದಸ್ಯೆಯನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್‍ನಲ್ಲೀ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಭಾರೀ ಪೈಪೋಟಿಯನ್ನೆ ಬಳಸಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಭಾರೀ ರಣತಂತ್ರ ರೂಪಿಸಿದೆ. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೆಡಿಎಸ್ ಕೂಡ ಸುಮ್ಮನೇ ಕೂರದೇ ತಾನು ಕೂಡ ಮೇಯರ್ ಪಟ್ಟಕ್ಕೆ ಇನ್ನಿಲ್ಲದ ಸರ್ಕಸ್ ಆರಂಭಿಸಿದೆ.          ಪ್ರಸುತ್ತ ಕಾಂಗ್ರೆಸ್‍ಗೆ ಮೂರು ಬಾರಿ ಮೇಯರ್ ಸ್ಥಾನ ಬಿಟ್ಟು

ಹೇರ್ ಲೈನ್ ಇಂಟರ್ ನ್ಯಾಷನಲ್

Image
ಹೇರ್ ಲೈನ್ ಇಂಟರ್ ನ್ಯಾಷನಲ್       ಬೆಂಗಳೂರು: 28 ಆಗಸ್ಟ್, 2018: ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಇಂದು ಕರ್ನಾಟಕ ಸಲೂನ್ ಹಾಗು ವೆಲ್ನೆಸ್ ಸೆಂಟರ್ ಓನರ್ಸ್ ಎಸೋಸಿಯೇಶನ್ (ಕೆಎಸ್ಡಬ್ಲ್ಯುಒಎ) ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಘೋಷಿಸಿಕೊಂಡಿದೆ. ಈ ಸಂಬಂಧದಿಂದ ಹೇರ್ಲೈನ್ ಇಂಟರ್ನ್ಯಾಷನಲ್ ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಸಲೂನ್ಗಳಲ್ಲಿ ಟ್ರೈಕಾಲಜಿ ಮತ್ತು ಡರ್ಮಟಾಲಜಿಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಸಹಾಯಕೇಂದ್ರಗಳು ಗ್ರಾಹಕರ ಟ್ರೈಕಾಲಜಿ ಹಾಗು ಡರ್ಮಟಾಲಜಿ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತವೆ. ಕೂದಲು ಉದುರುವಿಕೆ ಮತ್ತು ಡರ್ಮಟಾಲಜಿಯ ಈ ಸಹಾಯಕೇಂದ್ರವನ್ನು ಮುಖ್ಯ ಅತಿಥಿಗಳಾದ ಶಾಸ್ತ್ರೀಯ ನೃತ್ಯ ಪಟು ವಾಣಿ ಗಣಪತಿ ಹಾಗೂ ಪಂಚಾಯತ್ ರಾಜ್ ನ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್ ಎಂ.ವಿ.ಸಾವಿತ್ರಿ ಅನಾವರಣಗೊಳಿಸಿದರು.        ಆ ಬಳಿಕ ಮಾತನಾಡಿದ ವಾಣಿ ಗಣಪತಿ, "ದಿನನಿತ್ಯದ ಬದುಕಿನ ಜಂಜಡಗಳ ಮಧ್ಯೆಯೇ ವಿಶೇಷ ಆರೈಕೆಯ ಬಗ್ಗೆ ಸಾಮಾನ್ಯರಿಗೂ ತಿಳುವಳಿಕೆ ಲಭ್ಯವಾಗುವಂತೆ ಮಾಡಲು ಇದು ಅತ್ಯುತ್ಯಮ ಮಾರ್ಗವಾಗಿದೆ. ಇದು ಗ್ರಾಹಕರ ಮತ್ತು ಸಂಸ್ಥೆಯ ಮಧ್ಯೆ ಉತ್ತಮ ಬಾಂಧವ್ಯವನ್ನು ಏರ್ಪಡಿಸುತ್ತದೆ. ಟ್ರೈಕಾಲಜಿ ಮತ್ತು ತ್ವಚೆ ಆರೈಕೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆ ಸಲೂನ್ಗಳಿಗೂ ವಿಶ್ವಾಸಾರ್ಹ ಹೆಸರಿನ ಬೆಂಬಲವನ್ನು ನೀಡಲಿದೆ
Image
ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಪ್ಲಾಸ್ಟಿಕ್ ಬಳಕೆಯನ್ನು ರಾಜ್ಯ ಸರ್ಕಾರವು 2016ರ ಮಾರ್ಚ್ 11ರಿಂದ ನಿಷೇಧಿಸಿದ್ದರು ಸಹ  ನಗರದಲ್ಲಿ ಕಂಡುಕಾಣದಂತೆ ಪ್ಲಾಸ್ಟಿಕ್ ಉಪಯೋಗವಾಗುತ್ತಿದೆ. ಇದರಿಂದಾಗಿ ನಗರದಲ್ಲಿ 300-400 ಟನ್ ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತಿದ್ದು, ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಜಯನಗರವನ್ನು ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಪಣತೊಟ್ಟಿರುವ ಶಾಸಕಿ ಸೌಮ್ಯಾರೆಡ್ಡಿರವರು  ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಜಾಗೃತಿ ಆಭಿಯಾನವನ್ನು ಆಯೋಜಿಸಿದರು. ಅಭಿಯಾನಕ್ಕೆ ನೂರಾರು ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಆಗಮಿಸಿದ್ದರು.

ಅದ್ದೂರಿ ಸ್ವಾತಂತ್ರ್ಯೋತ್ಸವ

Image
ಬೆಂಗಳೂರಿನ ಸೇಂಟ್ ಮಾರ್ಕ್ಸ್ ಇಂಗ್ಲೀಷ್ ಶಾಲೆಯಲ್ಲಿ  ಅದ್ದೂರಿ ಸ್ವಾತಂತ್ರ್ಯೋತ್ಸವ..      ಸೇಂಟ್ ಮಾರ್ಕ್ಸ್ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ನ  ಉಪಾಧ್ಯಕ್ಷರಾದ  ತಿಮ್ಮರಾಜು ಅವರು ನೆರವೇರಿಸಿದರು. ಸಮಾರಂಭದಲ್ಲಿ  ಶಾಲೆಯು ಅಧ್ಯಕ್ಷರಾದ ಶ್ರೀರಂಗಮ್ಮ, ನಿವೃತ್ತ ಪ್ರಾಂಶುಪಾಲರಾದ ಶಾರದಮ್ಮ, ಶಾಲಾ ಆಡಳಿತದ ಪ್ರದೀಪ್ ಕುಮಾರ್ ಡಿ.ಸಿ ಹಾಗೂ ಚೈತ್ರ ಕೆ.ಪಿ ಹಾಗೂ ಓಂ ಪ್ರಕಾಶ್ ಅವರು ಉಪಸ್ಥಿತಾಗಿದ್ದರು.             ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತಿಮ್ಮರಾಜು ಅವರು ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪೋಷಕರು ಮಾಡಬೇಕು, ಮಕ್ಕಳ ಆಸಕ್ತಿ ಅನುಗುಣವಾಗಿ ಬೆಳೆಯಲು ಪ್ರೇರೆಪಣೆ ನೀಡಬೇಕು. ಇಂದಿನ ಮಕ್ಕಳು ಉತ್ತಮ ಕೌಶಲ್ಯವನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಜೀವಿಸಬೇಕು. ಏನಾದರೂ ಗುರಿಮಟ್ಟಲು, ಅವರ ಆಶಾಭಾವನೆ ಕೆದಿಕಿ  ನಾವು ಮಾರ್ಗದರ್ಶ ನೀಡಬೇಕು. ಪೋಷಕರು ಅವರಲ್ಲಿನ ಆಸಕ್ತಿ ತುಂಬಿ ಅವರ ಏಳಿಗೆಗೆ ಶ್ರಮಿಸಬೇಕು ಎಂದು ಮಕ್ಕಳಿಗೆ ಉಪಯುಕ್ತ  ಮಾಹಿತಿ ನೀಡಿದರು.    ಮಕ್ಕಳನ್ನು ಹೆಚ್ಚು ಅಂಕಗಳನ್ನು ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಅವರಲ್ಲಿನ ಪ್ರತಿಭೆಯ ಆಧಾರದ ಮೇಲೆ ಅವರಿಗೆ ಸ್ಪೂರ್ತಿ ತುಂಬಬೇಕು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಶುಭಾಷಯ ಕೋರುತ್ತ ತಮ್ಮ ಬಾಷಣವನ್ನು

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ

Image
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ  ವಿರುದ್ದ ನೌಕರರ ಧರಣಿ ಸತ್ಯಾಗ್ರಹ     ಬೆಂಗಳೂರು, ಜುಲೈ 09, 2018: ತಮಿಳುನಾಡು ಮೂಲಕ ಆಡಳಿತ ಮಂಡಳಿಯ ಅಧೀನದಲ್ಲಿರುವ  ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಇಂದು ನೂರಕ್ಕೂ  ಹೆಚ್ಚು ಸಿಬ್ಬಂದಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿದರು.        ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂದಿ  ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ, ಆರ್ ಆರ್ ಎಂ ಸಿ ಹೆಚ್  ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ವಹಿಸಿದ್ದರು.      ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ  ವೆಂಟಕಸ್ವಾಮಿ ಮಾತನಾಡಿ, 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಮೇಲೆ ಆಡಳಿತ ಮಂಡಳಿ  ಮೊದಲಿನಿಂದಲೂ ಕೂಡಾ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಕಾಲ ಸೇವೆ  ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಕಟ್ಟಿದ್ದೇ ತಪ್ಪಾಗಿದೆ,  ಸಂಘದ ಮುಖಂಡರುಗಳಿಗೆ ತೀವ್ರ ಕಿರುಕುಳ ನೀಡಲಾರಂಭಿಸಿದ್ದಾರೆ ಅಲ್ಲದೆ, 6 ಜನ ನೌಕರರನ್ನು  ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಪ್ಪಂದ

Image
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಪ್ಪಂದ           ತುಮಕೂರಿನ ವಸಂತ ನರಸಾಪುರದಲ್ಲಿ ರಾಜ್ಯದಲ್ಲೇ ದೊಡ್ಡ ಕೈಗಾರಿಕಾ ಹಬ್  ಒಪ್ಪಂದ   ಸಜ್ಜಾಗಿದೆ.  ಹಲವು ದಿನಗಳಿಂದ ಈ ಭಾಗದ ಕೈಗಾರಿಕಾ ಹಬ್ ಇದೀಗ ಟೇಕಾಫ್ ಆಗಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೆನ್ನೈ-ಬೆಂಗಳೂರು        ಕೈಗಾರಿಕಾ ಕಾರಿಡಾರ್ನ ಭಾಗವಾದ ತುಮಕೂರು ಕೈಗಾರಿಕಾ   ನಿರ್ಮಾಣ ಕೆಲಸಕ್ಕೆ ಮುನ್ನುಡಿ ಬರೆದಂತಾಗಿದೆ.        ರಾಜ್ಯ ಸರಕಾರ ಶೇರ್‌ಹೋಲ್ಡರ್ಸ್, ಅಗ್ರಿಮೆಂಟ್ (ಎಸ್‌ಎಚ್‌ಎ) ಹಾಗೂ ಸ್ಟೇಟ್‌ ಸಪೋರ್ಟ್‌ ಅಗ್ರಿಮೆಂಟ್ (ಎಸ್‌ಎಸ್‌ಎ) ಮಾಡಿಕೊಳ್ಳುವ ಮೂಲಕ ಕೆಲಸಕ್ಕೆ ಚಾಲನೆ ಸಿಕ್ಕಿದ್ದು. ಕೇಂದ್ರ ಸರಕಾರದ ಐದು ವಿಶೇಷ ವಾಣಿಜ್ಯ ಹಾಗೂ ಕೈಗಾರಿಕಾ ಕಾರಿಡಾರ್‌ನ ಪೈಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಕೂಡ ಒಂದು. ಉತ್ಪಾದನಾ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯೋಗ ಸೃಷ್ಟಿಸಲು ಈ ಕಾರಿಡಾರ್ ನಿರ್ಮಾಣ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ.     ಸಿಬಿಐಸಿ ಕಾರಿಡಾರ್ ಬೆಂಗಳೂರು ಹಾಗೂ ಚೆನ್ನೈ ಸಿಟಿಗಳನ್ನು ಲಿಂಕ್ ಮಾಡಲಿದ್ದು, 560 ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ಚೇತರಿಸಿಕೊಳ್ಳಲಿದೆ. ಜತೆಗೆ ಕರ್ನಾಟಕದ 16 ಜಿಲ್ಲೆ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕ

ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ

Image
ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ       ಬೆಂಗಳೂರು: ರಾಜಧಾನಿಯಲ್ಲಿ ಸಾವಯವ ಮೇಳ ಆಯೋಜಿಸಿರುವುದು  ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಇದರ ಬಗ್ಗೆ ಅರಿವು ಉಂಟಾಗಲು ಸಹಾಯಕವಾಗಲಿದೆ. ಈ ಮೇಳ ಆಯೋಜಿಸಿರುವ ಐಸಿಸಿಒಎಯ ಒಂದು ಉತ್ತಮ ಉಪಕ್ರಮ ಇದಾಗಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಶ್ಲಾಘನೆ    ವ್ಯಕ್ತಪಡಿಸಿದರು.          ಇಂಟರ್‌ನ್ಯಾಾಷನಲ್ ಕಂಪಟೆನ್‌ಸ್‌ ಸೆಂಟರ್ ಫಾರ್ ಆರ್ಗ್ಯಾನಿಕ್  ಅಗ್ರಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ  ಕೋರಮಂಗಲದಲ್ಲಿ ನಿನ್ನೆ  ಮತ್ತು ಇಂದು ನಡೆಯುತ್ತಿರುವ ಸಾವಯವ ಕೃಷಿ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಂತಹ ಸಾವಯವ ಆಹಾರ ಪದಾರ್ಥಗಳ ಮೇಳ ಆಯೋಜಿಸಿರುವುದರಿಂದ ರೈತರಿಗೆ ಲಾಭವಾಗಲಿದೆ. ಜೊತೆಗೆ ದೇಶಾದ್ಯಂತ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುವುದರಿಂದ  ಹೆಚ್ಚಿನ ಲಾಭ  ರೈತರಿಗೆ ದೊರೆಯಲಿದೆ ಎಂದು ಹೇಳಿದರು.          ಕರ್ನಾಟಕ ಸಾವಯವ ಆಹಾರ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹೀಗಾಗಿ ಸಾವಯವ ಆಹಾರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಸಾವಯವ ಬೆಳೆ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸಾವಯವ ಪದಾರ್ಥಗಳನ್ನು ಜನರಿಗೆ ಪರಿಚಯಿಸಲು ಈ ಮೇಳ ಆಯೋಜಿಸಿದ್ದು, ನಗರಾದ್ಯಂತ ಜನರು ಆಗಮಿಸಿ ಈ ಮೇಳ ಯಶಸ್ವಿಗೊಳಿಸಬೇಕು  ಎಂದರು.        ಈ ಮೇಳದಲ್ಲಿ ಸಾವಯವ ರೀಲೆಟರ್‌ಗಳು ಭಾಗಿಯಾಗಲಿದ್ದು, ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲಾಗುತ್ತದೆ.

ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ

Image
 ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ       ಬಿ.ಎಸ್. ಪಾಟೀಲ್ ರವರ  ತಂಡ ಸರಕಾರಕ್ಕೆ  ಸಲ್ಲಿಸಿರುವ  ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ  ಪದ್ಮನಾಭರೆಡ್ಡಿ   ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ  ಬಿ.ಎಸ್. ಪಾಟೀಲ್  ವರದಿಯ ಮೇಲೆ  ಮಾತನಾಡತ್ತ. ಯಾವುದೇ  ಕಾರಣಕ್ಕೆ  ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ  ಬಿ.ಎಸ್ ಪಾಟೀಲ್ ವರದಿಯನ್ನು  ಒಟ್ಟಾಗಿ  ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ   ಅಭಿಪ್ರಾಯ  ಪಡೆದುಕೊಳ್ಳದೆ ವರದಿ ನೀಡಲಾಗಿದೆ  ಎಂದು ಅಸಮಾದಾನ ವ್ಯಕ್ತಪಡಿಸಿದರು.        ಪದ್ಮನಾಭರೆಡ್ಡಿ ಯವರ ಮಾತಿಗೆ  ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್  ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು.     ನಂತರ ಮಾತನಾಡಿದ ಶಾಸಕರುಗಳಾದ ಭೈರತಿ ಸುರೇಶ್ ಮುನಿರತ್ನ ನಾಯ್ಡು ಮತ್ತು  ಎಸ್ ಟಿ ಸೋಮಶೇಖರ್ ಕಸದ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟ್ರಾಕ್ಟರ್ ಗಳಿಗೆ ನೇರವಾಗಿ ಹಣ ಜಮೆ ಮಾಡುವ ಬದ
Image
ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ     ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್. ಮಹದೇವಸ್ವಾಮಿ  ಘನ  ಸರ್ಕಾರವು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ದಿನಾಂಕ 29/06/2017 ರಂದು ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ವಿಷಯವಾಗಿ  ವಿಶೇಷ ರಾಜ್ಯಪತ್ರ ಹೊರಡಿಸಿದ್ದು ಈ ಆದೇಶದಂತೆ ಮೀಸಲಾತಿ ನೀಡದೆ ಕಾವೇರಿ ನೀರಾವರಿ ನಿಗಮ ನರಸೀಪುರ ಹೆಚ್ ಆರ್ ಬಿ ಆರ್  ವಿಭಾಗದಲ್ಲಿ ಟೆಂಡರ್ ಕರೆದಿದ್ದಾರೆ . ನರಸಿಪುರ ತಾಲ್ಲೂಕಿನ ಎಸ್ಸಿ /ಎಸ್ಟಿ  ಬಂಧುಗಳು ರೂ ಐವತ್ತು ಲಕ್ಷಗಳ ವರೆಗೆ ಮೀಸಲಾತಿ ಇರುವುದರಿಂದ ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಐವತ್ತು ಲಕ್ಷಗಳ ಮೇಲಿನ ಅಂದಾಜು ವೆಚ್ಚ ಬರುವ ಹಾಗೆ ತಯಾರಿಸಿ ಪ್ಯಾಕೇಜ್ ಟೆಂಡರ್ ಕರೆದಿದ್ದು ರದ್ದು ಮಾಡಿ ಸರ್ಕಾರಿ ಆದೇಶದಂತೆ ಮೀಸಲಾತಿ ನೀಡಿ ಟೆಂಡರ್ ಕರೆಯ ಬೇಕೆಂದು ಮನವಿ ಮಾಡಿರುತ್ತಾರೆ ಈ ವಿಷಯವಾಗಿ ಹೊಳೆನರಸೀಪುರ ತಾಲ್ಲೂಕಿನ ಸಿಎಸ್ಟಿ ಗುತ್ತಿಗೆದಾರರು ಐದು ದಿನಗಳ ಧರಣಿ ಕೂಡ ಮಾಡಿರುತ್ತಾರೆ     ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರಾದ ಎಂ. ಪುಟ್ಟರಾಜು ಅವರು ಟೆಂಡರನ್ನು ರದ್ದು ಮಾಡುವುದಾಗಿ ಹೇಳಿ ರದ್ದು  ಮಾಡದೆ ಟೆಂಡರ್ ಅನ್ನು ಮುಂದುವರಿಸಿರುತ್ತಾ

ಮಹೇಂದ್ರ ಮುನೋತ್ ಅವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ

Image
   ಮಹೇಂದ್ರ ಮುನೋತ್ ಅವರ    51ನೇ ವರ್ಷದ ಹುಟ್ಟುಹಬ್ಬ ಆಚರಣೆ         ಬಾಲಾಜಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ   ಮುನೋತ್ ಅವರ  51ನೇ ಹುಟ್ಟುಹಬ್ಬದ ಆಚರಣೆಯನ್ನು ವಿಜಯನಗರದ ಬಾಲಾಜಿ ಮೆಡಿಕಲ್ಸ್ ಸಮೀಪದಲ್ಲಿ  ಮಹೇಂದ್ರ  ಅಭಿಮಾನಿಗಳು ಆಚರಿಸಿದರು.    ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹೇಂದ್ರ  ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ವಿತರಿಸಿದರು.     ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಆನಂದ್ ಹೊಸೂರು, ಶಿವರಾಮೇಗೌಡ, ಜಿಮ್ ನವೀನ, ನಾಗರಿಕರು ಹಾಗೂ ಅಭಿಮಾನಿಗಳು ಶುಭ ಕೋರಿದರು         ನಂತರ ಮಾತನಾಡಿದ ಮಹೇಂದ್ರ  ಕರ್ನಾಟಕದ ಜನತೆ ನಾಡ ಪ್ರೇಮಿಗಳು ದೇಶಪ್ರೇಮಿಗಳು ಹೃದಯ ಶ್ರೀಮಂತರು ಎಲ್ಲರಿಗೂ ನನ್ನ  ಹೃದಯ ಪೂರ್ವಕ ನಮಸ್ಕಾರಗಳು ಯಾವ ಮನುಷ್ಯ ತನಗಾಗಿ ಬದುಕುತನೊ ಅವನ ಜೀವನ ವ್ಯರ್ಥ ನಿಜವಾದ ಜೀವನ ಅಂದರೆ ಅವರಶಕ್ತಿಯನ್ನು ನಿಶ್ಶಕ್ತಿ ಒಂದ ವ್ಯಕ್ತಿಗಳಿಗೆ ಸದುಪಯೋಗ  ಮಾಡುತ್ತಾರೆ.  ಸೇವೆಯೂ ಬರೀ  ಪ್ರದರ್ಶನವಾಗಬಾರದು ಸೇವೆ ಮಾನವನ ಕರ್ತವ್ಯವಾಗಬೇಕು ನನಗೆ ಯಾವ  ಸ್ವಾರ್ಥ ಇಲ್ಲ ನನ್ನಲ್ಲಿ ಒಂದೇ ಒಂದು ಸ್ವಾರ್ಥ  ಅಂದರೆ ಎಲ್ಲರ ಹೃದಯದಲ್ಲಿ ನನ್ನ ಸ್ಥಾನವನ್ನು ಬಯಸುತ್ತೇನೆ.  ಇಟ್ಟಿಗೆ ಸಿಮೆಂಟ್ನಿಂದ ಬಂಗಲೆ ಕಟ್ಟಬಹುದು ಆದರೆ  ನನ್ನ ಮನೆಯನ್ನು ನಿಮ್ಮ ವಿಶಾಲವಾದ  ಹೃದಯದಲ್ಲಿ ಕಟ್ಟಲು ಬಯಸುತ್ತೇನೆ.        ನನಗೆ ನನ್ನ ಹುಟ್ಟ

ಸರ್ವಜನ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Image
ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಪ್ರತಿಭಟನೆ      ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಸರ್ವಜನ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರಿಂದ   ದೊಡ್ಡಕಲ್ಲಸಂದ್ರದ ರುದ್ರಭೂಮಿಯ ಮುಂದೆ ಪ್ರತಿಭಟನೆ  ಮಾಡಲಾಯಿತು.       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಉತ್ತರಹಳ್ಳಿ  ಕೆ.ಎನ್. ಮೂರ್ತಿ  ಈ ರುದ್ರಭೂಮಿಯೂ ಸುಮಾರು 100 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಸುತ್ತಮುತ್ತಲಿನ ಪ್ರದೇಶದ ದಲಿತರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಂಗಳವಾರ ಕೆಲವು ಕಿಡಿಗೇಡಿಗಳು ರಿಯಲ್ ಎಸ್ಟೇಟ್ ಮಾಡುವ ಸಲುವಾಗಿ ಹಾಗೂ  ಭೂ ಕಬಳಿಸಲು ರುದ್ರಭೂಮಿಯನ್ನು ತೆರವುಗೊಳಿಸಿ ಸಮತಟ್ಟು ಮಾಡಿದ್ದಾರೆ.         ಇದರ ಬಗ್ಗೆ  ತಹಸೀಲ್ದಾರ್ ಬಳಿ ದೂರನ್ನು ನೀಡಿದ್ದೇವೆ. ಅವರು ಇದರ ದಾಖಲಾತಿಗಳನ್ನು ಶೀಘ್ರವೇ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ರುದ್ರಭೂಮಿಯ ಪುನರ್ ನಿರ್ಮಾಣವಾಗುವವರೆಗೂ ಹಾಗೂ ಕಿಡಿಗೇಡಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.               ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಗೌಡ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Image
ಕೇಂದ್ರ ಸರ್ಕಾರದ  ವಿರುದ್ಧ ಕಾಂಗ್ರೆಸ್ ಪ್ರತಿಭಟನೆ    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ತನಿಖಾ ತಂಡಗಳನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದು  ಆರೋಪಿಸಿ  ರಾಜ್ಯ ಕಾಂಗ್ರೆಸ್ ನಾಯಕರು  ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.      ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.        ಮನೋಹರ್ ಮಾತನಾಡಿ, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ದಾಳಿ ಮಾಡಿಸಿ, ಸೇಡು ತೀರಿಸಿಕೊಳ್ಳುವ ಯತ್ನ ಮಾಡಿತ್ತಿದೆ. ಇಂದು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಸಿಬಿಐ ದಾಳಿಗೆ ಮುಂದಾಗಿರುವ  ವಿಷಯ ತಿಳಿದಿದೆ. ಇದರ ವಿರುದ್ಧ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಮ್ಮ ನಾಯಕರ ವಿರುದ್ಧ ಕೇಂದ್ರ ಸರ್ಕಾರಸೇಡಿನ ರಾಜಕಾರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.          ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ಮೋಡಿ ರಾಜರಾಜೇಶ್ವರಿ ನಗರ ದಲ್ಲಿ ನಡೆದಿಲ್ಲ. ಮುನಿರತ್ನ ಗೆದ್ದಿದ್ದಾರೆ. ಇವರ ಅರ್ಧದಷ್ಟು ಮತವನ್ನು ಕೂಡ ಬಿಜೆಪಿ, ಜೆಡಿಎಸ್ ಸೇರಿ ಪಡೆದಿಲ್ಲ. ಸಿದ್ದರಾಮಯ್ಯ ನವರಜನಪರ ಕಾರ್ಯಕ್ಕೆ ಮತದಾರರು ಇನ್ನೊಂದ

ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್ ಮೊದಲ ವಾರ್ಷಿಕೋತ್ಸವ

Image
ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವ           ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವು  ದೀಪ ಬೆಳಗುವ ಮೂಲಕ  ಪ್ರಾರಂಭಿಸಲಾಯಿತು.            ನಂತರ  ಮಾತನಾಡಿದ  ಅಸೋಸಿಯೇಷನ್  ಅಧ್ಯಕ್ಷರಾದ   ಶ್ರೀ ಜಯಂತ್ ಗಾಣಿಗ,   ನಮ್ಮ ಅಸೋಸಿಯೇಷನ್ ಒಂದು ವರ್ಷ ಪೂರ್ಣಗೊಂಡಿದೆ ಅದಕ್ಕೆ ನನಗೆ  ತುಂಬಾ ಸಂತೋಷವಾಗಿದೆ ಈ ಒಂದು ವರ್ಷದಲ್ಲಿ ಎಲ್ಲ ಜಿಲ್ಲೆಯ ಅಧ್ಯಕ್ಷರೊಡನೆ  ವಿತರಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ಮುಂಬರುವ ದಿನಗಳಲ್ಲಿ ತೊಂದರೆಗಳು ಸರಿಪಡಿಸಲು  ಹಾಗೂ ವಿತರಕರಿಗೆ ಸಿಗಬೇಕಾದ ಸೌಲತ್ತುಗಳನ್ನು  ಕೊಡಿಸಲು ಎಲ್ಲಾ ಜಿಲ್ಲೆಯ ಅಧ್ಯಕ್ಷರು ಒಟ್ಟುಗೂಡಿ ಓಡಾಡುತ್ತೇವೆ ಎಂದು ಹೇಳಿದರು.            ಈ ಸಂದರ್ಭದಲ್ಲಿ   ಧೈರ್ಯ ಶಾಲಾ ಪಾಟೀಲ್ , ಸುಭಾಷ್ ಮತ್ತು   ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ದೂರು ದಾಖಲು

Image
 ಬಿ.ಎಸ್‌. ಯಡಿಯೂರಪ್ಪ ವಿರುದ್ಧ  ದೂರು ದಾಖಲು         ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಕಳೆದ ಶನಿವಾರ ವಿಧಾನಸಭೆಯಲ್ಲಿ  ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ನ್ಯಾಯವಾದಿ ಜ್ಞಾನಪ್ರಕಾಶ್‌ ದೂರು ದಾಖಲಿಸಿದ್ದಾರೆ.          ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ವಿಧಾನಸಭೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದರೂ ಬಿಜೆಪಿ ಮುಖಂಡರಾದ ಯಡಿಯೂರಪ್ಪ  ವಿಧಾನಸಭೆಯ ಸದನದಿಂದ ಹೊರ ನಡೆದಿದ್ದರು ಎಂದು ನ್ಯಾಯವಾದಿ ಜ್ಞಾನಪ್ರಕಾಶ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಂಡಾನ್ಯಾಯಾಲಯ ದೂರು ಸ್ವೀಕರಿಸಿದ್ದು, ಮುಂದಿನ ವಿಚಾರಣೆ ಮೇ 29ಕ್ಕೆ ನಿಗದಿಪಡಿಸಲಾಗಿದೆ.

ಹ್ಯಾಟ್ರಿಕ್ ಕ್ಷೇತ್ರ ಬಿಜೆಪಿ ಕ್ಷೇತ್ರ ?

Image
ರಾಜಕೀಯ ಜಿದ್ದಾಜಿದ್ದಿಯಲ್ಲಿ ಈ ಮೂರು ವಿಧಾನಸಭಾ  ಕ್ಷೇತ್ರಗಳು         ಗುರು ಶಿಷ್ಯರ ಸಮ್ಮಿಲನ ಹೌದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ  ವಿ. ಸೋಮಣ್ಣ, ವಿಜಯನಗರ ವಿಧಾನಸಭಾ ಕ್ಷೇತ್ರದ  ಅಭ್ಯರ್ಥಿಯಾದ ಎಚ್. ರವೀಂದ್ರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಂ. ಲಕ್ಷ್ಮಿನಾರಾಯಣ ಒಂದುಗೂಡಿ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿದ್ದಾರೆ.   ಹ್ಯಾಟ್ರಿಕ್ ಹೊಸ್ತಿಲಲ್ಲಿರುವ ಶಾಸಕರು ಹಾಗೂ ಹಾಲಿ ಶಾಸಕರನ್ನು ಸೋಲಿಸಿ, ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಹ್ಯಾಟ್ರಿಕ್  ಕ್ಷೇತ್ರವಾಗಲಿದೆ, ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ಆದರೆ ಈ ಬಾರಿ ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ?....... 
Image
ಮಹಿಳಾ ಮತದಾರರಿಗಾಗಿ ಸಖಿ ಪಿಂಕ್ ಬೂತ್  2018ರ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಹಿಳಾ ಮತದಾರರಿಗೆ ಎಂದೇ ಸಖಿ ಪಿಂಕ್ ಬೂತ್ ಅನ್ನು  ತೆರೆದಿದೆ