ಸರ್ವಜನ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಪ್ರತಿಭಟನೆ 



    ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಸರ್ವಜನ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರಿಂದ   ದೊಡ್ಡಕಲ್ಲಸಂದ್ರದ ರುದ್ರಭೂಮಿಯ ಮುಂದೆ ಪ್ರತಿಭಟನೆ  ಮಾಡಲಾಯಿತು. 
     ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಉತ್ತರಹಳ್ಳಿ  ಕೆ.ಎನ್. ಮೂರ್ತಿ  ಈ ರುದ್ರಭೂಮಿಯೂ ಸುಮಾರು 100 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಸುತ್ತಮುತ್ತಲಿನ ಪ್ರದೇಶದ ದಲಿತರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಂಗಳವಾರ ಕೆಲವು ಕಿಡಿಗೇಡಿಗಳು ರಿಯಲ್ ಎಸ್ಟೇಟ್ ಮಾಡುವ ಸಲುವಾಗಿ ಹಾಗೂ  ಭೂ ಕಬಳಿಸಲು ರುದ್ರಭೂಮಿಯನ್ನು ತೆರವುಗೊಳಿಸಿ ಸಮತಟ್ಟು ಮಾಡಿದ್ದಾರೆ.
        ಇದರ ಬಗ್ಗೆ  ತಹಸೀಲ್ದಾರ್ ಬಳಿ ದೂರನ್ನು ನೀಡಿದ್ದೇವೆ. ಅವರು ಇದರ ದಾಖಲಾತಿಗಳನ್ನು ಶೀಘ್ರವೇ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ರುದ್ರಭೂಮಿಯ ಪುನರ್ ನಿರ್ಮಾಣವಾಗುವವರೆಗೂ ಹಾಗೂ ಕಿಡಿಗೇಡಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
              ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಗೌಡ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ