Posts

Showing posts from May, 2026

ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ವಿಜೃಂಭಣೆಯ ಕಾಲೇಜು ದಿನಾಚರಣೆ

Image
ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ವಿಜೃಂಭಣೆಯ ಕಾಲೇಜು ದಿನಾಚರಣೆ ಬೆಂಗಳೂರು: ನಗರದ ಕಬ್ಬನ್‌ಪೇಟೆಯಲ್ಲಿರುವ Abbas Khan College for Women (ಅಬ್ಬಾಸ್ ಖಾನ್ ಮಹಿಳಾ ಕಾಲೇಜು) ವತಿಯಿಂದ ಕಾಲೇಜು ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಂ.ಎ ಅಧ್ಯಕ್ಷ ಜನಾಬ್ ಫಾರೂಕ್ ಮಹಮೂದ್ ವಹಿಸಿ ಮಾತನಾಡಿ, “ಕಾಲೇಜು ಜೀವನವು ಕೇವಲ ಪಾಠ ಹಾಗೂ ಪ್ರದರ್ಶನಗಳಿಗೆ ಮಾತ್ರ ಸೀಮಿತವಲ್ಲ. ಅದು ಜೀವನದ ಗುರಿಯನ್ನು ಅರಿತುಕೊಳ್ಳುವ, ಆತ್ಮಪರಿಶೀಲನೆ ಮಾಡುವ ಹಾಗೂ ನಮ್ಮ ಹೊಣೆಗಾರಿಕೆಯನ್ನು ನೆನಪಿಸಿಕೊಳ್ಳುವ ಅಮೂಲ್ಯ ಕ್ಷಣವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. “ಶಿಕ್ಷಣವೇ ಪ್ರತಿಯೊಬ್ಬ ವಿದ್ಯಾರ್ಥಿಯ ಅತಿ ದೊಡ್ಡ ಶಕ್ತಿ. ಪವಿತ್ರ ಕುರ್‌ಆನ್‌ನಲ್ಲಿ ಮೊದಲಾಗಿ ಪ್ರಕಟವಾದ ಪದವೇ ‘ಇಖ್ರಾ’ – ಓದಿ. ಆದ್ದರಿಂದ ಕಲಿಕೆ ಒಂದು ಆಯ್ಕೆಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ. ಪಾಠಪುಸ್ತಕಗಳು ಮತ್ತು ಪರೀಕ್ಷೆಗಳು ಮುಖ್ಯವಾದರೂ, ನಿಜವಾದ ಶಿಕ್ಷಣವು ಅದರಾಚೆಗೆ ಸಾಗಬೇಕು” ಎಂದು ಹೇಳಿದರು. ಕಾಲೇಜಿನ 50ನೇ ವರ್ಷದ ಸೇವೆಯನ್ನು ಉಲ್ಲೇಖಿಸಿದ ಅವರು, ಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬದ್ಧವಾಗಿದೆ ಎಂದು ತಿಳಿಸಿದರು. “ವಿದ್ಯಾರ್ಥಿಗಳು ಬೌದ್ಧಿಕವಾಗಿ ಶಕ್ತಿಶಾಲಿ, ಭಾವನಾತ್ಮಕವಾಗಿ ಆತ್ಮವಿಶ್ವಾಸ ಹೊಂದಿದ, ದೈಹಿಕವಾಗಿ ಶಿಸ್ತುಬದ್ಧ ಹಾಗೂ ಸಾಮಾಜಿಕವಾಗಿ ಜಾಗೃತ ನಾಗರಿಕರಾಗಬೇಕು” ಎಂದು ಹೇಳಿದರ...

ಪೂಜಾ ಆಚಾರ್ಯರಿಗೆ ನ್ಯಾಯ ಕೊಡಿಸುವವರೆಗೆ ಹೋರಾಟ : ಕೆ ಪಿ ನಂಜುಂಡಿ

Image
  ಪೂಜಾ ಆಚಾರ್ಯರಿಗೆ ನ್ಯಾಯ ಕೊಡಿಸುವವರೆಗೆ ಹೋರಾಟ : ಕೆ ಪಿ ನಂಜುಂಡಿ ಬೆಂಗಳೂರು : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ನಗರದ ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾದ ಕೆಪಿ ನಂಜುಂಡಿ ಮಾತನಾಡಿ, ಪುತ್ತೂರಿನ ಬಡ ಹೆಣ್ಣುಮಗಳಾದ ಪೂಜಾ ಆಚಾರ್ಯರ ಮೇಲೆ ಅತ್ಯಾಚಾರ ಎಸಗಿ ಒಂದು ಗಂಡು ಮಗುವಿನ ಹುಟ್ಟಿಗೆ ಕಾರಣನಾದ ಶ್ರೀಕೃಷ್ಣ ಜೆ. ರಾವ್ ಹಾಗೂ ಉಳಿದ ಆರೋಪಿಗಳಾದ ತಂದೆ ಪಿ.ಜಿ. ಜಗನ್ನಿವಾಸ ರಾವ್, ಸಹೋದರಿ ವೈಷ್ಣವಿ ಪಿ.ಜಿ. ರಾವ್ ಮತ್ತು ದೊಡ್ಡಪ್ಪ ಚಂದ್ರಶೇಖರ್ ಪಿ.ಜಿ. ಅವರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಿನಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಕಳೆದ ಏಪ್ರಿಲ್ 24ರಂದು ಘನ ಉಚ್ಚ ನ್ಯಾಯಾಲಯವು ಆರೋಪಿಯಾದ ಪಿ.ಜಿ. ಶ್ರೀಕೃಷ್ಣ ರಾವ್ ಅವರಿಗೆ ಮಧ್ಯಂತರ ತಡೆಯಾಜ್ಞೆಯನ್ನು ಷರತ್ತುಬದ್ಧವಾಗಿ ನೀಡಿತ್ತು. ನ್ಯಾಯಾಲಯದ ಷರತ್ತಿನ ಪ್ರಕಾರ ಮೇ 1ರಂದು 75 ಸಾವಿರ ರೂ.ಗಳನ್ನು ಹಾಗೂ ಕೇಸ್‌ನ ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು 75 ಸಾವಿರ ರೂ.ಗಳನ್ನು ದೂರುದಾರರಾದ ಪೂಜಾ ಆಚಾರ್ಯ ಮತ್ತು ಮಗುವಿನ ಜೀವನೋಪಾಯ ಹಾಗೂ ಕಲ್ಯಾಣಕ್ಕಾಗಿ ನೀಡುವಂತೆ ಆದೇಶಿಸಲಾಗಿತ್ತು ಎಂದು ಹೇಳಿದರು. ಆದರೆ ಮೇ 1ರಂದು ನೀಡಬೇಕಿದ್ದ 75 ಸಾವಿರ ರೂ.ಗಳನ್ನು ಇದುವರೆಗ...