ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ

ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ


        ಶಿವ ಗರ್ಜನ್ ಯುವಸೇನೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವದ ಅಂಗವಾಗಿ ಮೆರವಣಿಗೆ ಯಾತ್ರೆಗೆ ಶ್ರೀ ಶ್ರೀ ಮಂಜುನಾಥ ಸ್ವಾಮೀಜಿ ಅವರು ಸದಾಶಿವನಗರದಲ್ಲಿರುವ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಚಾಲನೆ ನೀಡಿದರು.
     ಸದಾಶಿವ ನಗರದಿಂದ ಹೊರಟ ಮೆರವಣಿಗೆ ವಯ್ಯಾಲಿಕಾವಲ್ ಮಾರ್ಗವಾಗಿ ಮಲ್ಲೇಶ್ವರಂ ರಾಜಬೀದಿಗಳಲ್ಲಿ ಸಾಗಿ ಕಾಡು ಮಲ್ಲೇಶ್ವರ ದೇವಸ್ಥಾನ ತಲುಪಿತು. 
       ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರವರ ಆಡಳಿತಾವಧಿಯ ಉಡುಪುಗಳನ್ನು ಮಕ್ಕಳು, ಮಹಿಳೆಯರು
 ದರಿಸಿದು ನೋಡುಗರಿಗೆ ವಿಶೇಷವಾಗಿತ್ತು.
         ಈ ಸಂದರ್ಭದಲ್ಲಿ  ಪ್ರವೀಣ್ ಮಾಣೆ, ಲಯನ್ ಮನೋಜ್ ಕುಮಾರ್, ಶ್ರೀಧರ್, ಶಿವಕುಮಾರ್ ಪವಾರ್, ವಿಕ್ರಂ ಸಿಂಧ್ಯಾ ಹಾಗೂ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ