ಮಹೇಂದ್ರ ಮುನೋತ್ ಅವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ


  ಮಹೇಂದ್ರ ಮುನೋತ್ ಅವರ    51ನೇ ವರ್ಷದ ಹುಟ್ಟುಹಬ್ಬ ಆಚರಣೆ 


       ಬಾಲಾಜಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ  ಮುನೋತ್
ಅವರ  51ನೇ ಹುಟ್ಟುಹಬ್ಬದ ಆಚರಣೆಯನ್ನು ವಿಜಯನಗರದ ಬಾಲಾಜಿ ಮೆಡಿಕಲ್ಸ್ ಸಮೀಪದಲ್ಲಿ  ಮಹೇಂದ್ರ  ಅಭಿಮಾನಿಗಳು ಆಚರಿಸಿದರು. 
  ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹೇಂದ್ರ  ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ವಿತರಿಸಿದರು.
    ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಆನಂದ್ ಹೊಸೂರು, ಶಿವರಾಮೇಗೌಡ, ಜಿಮ್ ನವೀನ, ನಾಗರಿಕರು ಹಾಗೂ ಅಭಿಮಾನಿಗಳು ಶುಭ ಕೋರಿದರು
        ನಂತರ ಮಾತನಾಡಿದ ಮಹೇಂದ್ರ  ಕರ್ನಾಟಕದ ಜನತೆ ನಾಡ ಪ್ರೇಮಿಗಳು ದೇಶಪ್ರೇಮಿಗಳು ಹೃದಯ ಶ್ರೀಮಂತರು ಎಲ್ಲರಿಗೂ ನನ್ನ  ಹೃದಯ ಪೂರ್ವಕ ನಮಸ್ಕಾರಗಳು ಯಾವ ಮನುಷ್ಯ ತನಗಾಗಿ ಬದುಕುತನೊ ಅವನ ಜೀವನ ವ್ಯರ್ಥ ನಿಜವಾದ ಜೀವನ ಅಂದರೆ ಅವರಶಕ್ತಿಯನ್ನು ನಿಶ್ಶಕ್ತಿ ಒಂದ ವ್ಯಕ್ತಿಗಳಿಗೆ ಸದುಪಯೋಗ  ಮಾಡುತ್ತಾರೆ.  ಸೇವೆಯೂ ಬರೀ  ಪ್ರದರ್ಶನವಾಗಬಾರದು ಸೇವೆ ಮಾನವನ ಕರ್ತವ್ಯವಾಗಬೇಕು ನನಗೆ ಯಾವ  ಸ್ವಾರ್ಥ ಇಲ್ಲ ನನ್ನಲ್ಲಿ ಒಂದೇ ಒಂದು ಸ್ವಾರ್ಥ  ಅಂದರೆ ಎಲ್ಲರ ಹೃದಯದಲ್ಲಿ ನನ್ನ ಸ್ಥಾನವನ್ನು ಬಯಸುತ್ತೇನೆ.  ಇಟ್ಟಿಗೆ ಸಿಮೆಂಟ್ನಿಂದ ಬಂಗಲೆ ಕಟ್ಟಬಹುದು ಆದರೆ  ನನ್ನ ಮನೆಯನ್ನು ನಿಮ್ಮ ವಿಶಾಲವಾದ  ಹೃದಯದಲ್ಲಿ ಕಟ್ಟಲು ಬಯಸುತ್ತೇನೆ.


       ನನಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಇಷ್ಟವಿಲ್ಲ ಆದರೆ ಈ ನೆಪದಲ್ಲಾದರೂ ರಕ್ತದಾನ ಶಿಬಿರವು ನಡೆಯಲಿ ಎಂದಷ್ಟೇ  ನನ್ನ ಇಷ್ಟ. ರಕ್ತದಾನ ಮಹಾದಾನ ರಕ್ತದಾನ ಜೀವದಾನ, ರಕ್ತದಾನ ಶ್ರೇಷ್ಠ ದಾನ, ಈ ದೇಹದಲ್ಲಿ  ಒಂದು ಒಂದು ಹನಿ ಓಡಾಡಿದರೆ ಮನುಷ್ಯ ಬದುಕಿರಲು ಸಾಧ್ಯ. ಆದ್ದರಿಂದ ರಕ್ತದಾನವನ್ನು ಮಾಡಲು ಬಯಸುತ್ತೇವೆ.
      ಭಗವಂತ ನಮಗೆ ಪ್ರಕೃತಿ ಎಂದರೆ ಹಸಿರು ಗೋ ಮಾತೆ ಎಂದರೆ ಹಸು ವನ್ನು ನೀಡಿದ್ದಾರೆ ಹಸು ಇದ್ದರೆ  ಹಸಿವಿಲ್ಲಾ  ಹಸಿರು ಉಳಿದರೆ  ವಿಷವಿಲ್ಲಾ ಹಸು ಹಸಿರು ಎರಡು ಮನುಕುಲದ ಶ್ರೀರಕ್ಷೆ ಆದ್ದರಿಂದ ನಾವುಗಳು ಎರಡನ್ನು ರಕ್ಷಿಸಬೇಕು ಎಂದು ಹೇಳಿದರು

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ