ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..


ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..



     ಬೆಂಗಳೂರು ಏಪ್ರಿಲ್ 19: ನಗರದ ಜಯಮಹಲ್ ಬಿಬಿಎಂಪಿ  ಕಚೇರಿಯಲ್ಲಿ ತನ್ನ ತಾಯಿ ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸದ  ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ   ವೈ. ಎ. ನಾರಾಯಣಸ್ವಾಮಿ  ಅವರು ಗೆಲುವಿನ   ವಿಶ್ವಾಸವ್ಯಕ್ತ ಪಡಿಸಿದರು.
     ಹೆಬ್ಬಾಳ ಚುನಾವಣೆಯಲ್ಲಿ ಹಣದಿಂದಮತದಾರರ ಮನವೊಲಿಸಲು  ಸಾಧ್ಯವಿಲ್ಲ. ತಮ್ಮ ಹಣ ಬಲದಿಂದಲೇ ಎಲ್ಲವನ್ನು ಸಾಧಿಸುವ  ಉತ್ಸಾಹದಲ್ಲಿರುವ ಅಭ್ಯರ್ಥಿಗಳು ಸೋಲಿನ ರುಚಿಯನ್ನು ಕಾಣಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿನಾನು ಪ್ರತಿನಿತ್ಯ ಜನರ ಸೇವೆಯನ್ನು  ಮಾಡಿದ್ದೇನೆ ಜನರು ನಮ್ಮ ಸೇವೆಗೆ ಚುನಾವಣೆಯಲ್ಲಿ  ಉತ್ತರ ನೀಡಲಿದ್ದಾರೆ ಎಂದರು.                          
ವೈ.ಎ.ನಾರಾಯಣಸ್ವಾಮಿರವರ ತಾಯಿ ಪಾಪಮ್ಮ ಮಾತನಾಡಿ, ನನ್ನಮಗ ಜನರಸೇವೆ ಸಲ್ಲಿಸಿದ್ದು ಬಹುಮತದಿಂದ ಗೆಲ್ಲಲಿದ್ದಾರೆಅಲ್ಲದೆ, ಮಂತ್ರಿಯಾಗಿ ಇನ್ನೂ ಹೆಚ್ಚಿನ   ಸೇವೆ ಸಲ್ಲಿಸಲಿದ್ದಾರೆಎಂದರು.
   ಇದಕ್ಕೂ ಮುನ್ನ ರಾಧಾಕೃಷ್ಣ ಮಂದಿರದಿಂದ ನಡೆದ ಬೃಹತ್  ಮೆರವಣಿಗೆಯಲ್ಲಿ ಕೇಂದ್ರಸಚಿವ ಸದಾನಂದಗೌಡ ಸೇರಿದಂತೆ   ಸಾವಿರಾರು ಜನರು   ಭಾಗವಹಿಸಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ