ಕೇಂದ್ರ ಸರ್ಕಾರ ಮಹ್ವತದ ಯೋಜನೆಯಾದ "ಸ್ವಚ್ಚ ಭಾರತ"ಹಣ ದುರಪಯೋಗ.

ಕೇಂದ್ರ ಸರ್ಕಾರ ಮಹ್ವತದ ಯೋಜನೆಯಾದ "ಸ್ವಚ್ಚ ಭಾರತ"ಹಣ ದುರಪಯೋಗ.


ಬಿ.ಬಿ.ಎಂ.ಪಿ.ಜೆ.ಡಿ.ಎಸ್.ಪಕ್ಷದ ನಾಯಾಕಿಯಾದ ಶ್ರೀಮತಿ ನೇತ್ರಾ ನಾರಯಣ್ ರವರು ಬೆಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರ್ಕಾರದಿಂದ ಸ್ವಚ್ವ ಭಾರತ್ ಯೋಜನೆಯ ಆಡಿಯಲ್ಲಿ 154.98ಕೋಟಿ ರೂಪಾಯಿ ಬಿಡುಗಡೆ ಮಾಡಿರುತ್ತಾರೆ .ಅದರೆ ನಿರ್ಮಲ ಸೌಚಲಯ ,ಬೋರ್ ವೆಲ್ ನಿರ್ಮಾಣ ಹಾಗೂ ಕಸ ವಿಂಗಡನೆ ಘಟಕ ಸುತ್ತಮುತ್ತಲ ರಸ್ತೆ ನಿರ್ಮಾಣ ಹಣ ವಿನಿಯೋಗಿಸಬೇಕು .ಅದರೆ ಬಿ.ಬಿ.ಎಂ.ಪಿ.ಅಧಿಕಾರಿಗಳ ,ದುರುಪಯೋಗ ಆಡಳಿತದಿಂದ ಸ್ವಚ್ವ ಭಾರತ್ ಯೋಜನೆ ಮೀಸಲು ಇಟ್ಟ ಹಣ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಿದ್ದಾರೆ. ಬೆಂಗಳೂರು ಹೊರ ವಲಯ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ, ಬಾಗಲೂರುನಲ್ಲಿ ರಸ್ತೆ ನಿರ್ಮಾಣ ಹಾಗೂ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿರುವುದು 250ಕ್ಕೂ ಹೆಚ್ಚು ಕಾಮಗಾರಿಗಳು ಕೈಗೊಂಡಿದ್ದಾರೆ. ಸಹ ಮುಖ್ಯ ಆರ್ಥಿಕಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ, ಸ್ವಚ್ವ ಭಾರತ್ ಯೋಜನೆ ಕಡತಗಳನ್ನು ಅಧಿಕಾರಿಗಳು ಗಮನಹರಿಸದೇ ಜಾಬ್ ಕೋಡ್ ನೀಡುತ್ತಿದ್ದಾರೆ. 100ಕೋಟಿಗಿಂತ ಹೆಚ್ಚು ಹಣ ಭಷ್ಟಚಾರ ನಡೆದಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿರವರಿಗೆ, ರಾಜ್ಯಪಾಲರಿಗೆ ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್.ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ರವರಿಗೆ ಮತ್ತು ಸಿ.ಬಿ.ಐ ಇಲಾಖೆಗೆ ದೂರು ನೀಡಲಾಗುವುದು ಎಂದು ಶ್ರೀಮತಿ ನೇತ್ರ ನಾರಾಯಣ್ ರವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ