ಲಯನ್ಸ್ ಜಿಲ್ಲಾ 317ಎ ಸುವರ್ಣ ಮಹೋತ್ಸವ ಅದ್ದೂರಿ ಯಶಸ್ಸು – ಸೇವಾ ಚಟುವಟಿಕೆಗಳ ಮಹಾಸಂಗಮ ಬೆಂಗಳೂರು : ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ಎ ವತಿಯಿಂದ 50ನೇ ಸುವರ್ಣ ಮಹೋತ್ಸವ ಹಾಗೂ ಜಿಲ್ಲಾ ಸಮಾವೇಶವು ವಿಜಯನಗರದ ಬಂಟ್ಸ್ ಸಂಘ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಐದು ದಶಕಗಳ ಸೇವಾ ಪಯಣವನ್ನು ಸ್ಮರಿಸುವ ಈ ಮಹೋತ್ಸವವು ಸಮಾಜ ಸೇವೆ, ಮಾನವೀಯ ಮೌಲ್ಯಗಳು ಹಾಗೂ ಬದ್ಧತೆಯ ಪ್ರತೀಕವಾಗಿ ಗಮನ ಸೆಳೆಯಿತು. ಜಿಲ್ಲಾ ರಾಜ್ಯಪಾಲರಾದ ಡಾ. ಜಿ. ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಅಂತರರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷರಾದ ಡಾ. ಮನೋಜ್ ಷಾ ಉದ್ಘಾಟಿಸಿದರು. ಲಯನ್ಸ್ ಇಂಟರ್ನ್ಯಾಷನಲ್ ಮಾಜಿ ನಿರ್ದೇಶಕರಾದ ವಿಜಯ್ ಕುಮಾರ್ ರಾಜು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.ಮಲ್ಟಿಪಲ್ ಕೌನ್ಸಿಲ್ ಚೇರ್ಪರ್ಸನ್ ಮೋಹನ್ ಕುಮಾರ್ ಎನ್, ಪ್ರಥಮ ಉಪ ರಾಜ್ಯಪಾಲರಾದ ಕೆ. ಈಶ್ವರನ್, ದ್ವಿತೀಯ ಉಪ ರಾಜ್ಯಪಾಲರಾದ ಶಶಿಧರ್ ಗಂಜಿಗಟ್ಟಿ, ಆತಿಥೇಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಯಾದಾಳಂ, ಲಯನ್ ಅಶೋಕ್ ಕುಲಕರ್ಣಿ, ಲಯನ್ ಎಸ್. ಮನೋಜ್ ಕುಮಾರ್, ಹರಿಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುವರ್ಣ ಮಹೋತ್ಸವದ ಅಂಗವಾಗಿ 25 ಶಹೀದ್ ಕುಟುಂಬಗಳಿಗೆ ಸನ್ಮಾನ, 25 ವೀರ ಯೋಧರಿಗೆ ಗೌರವ, ವಿಕಲಚೇತನರಿಗೆ 6 ಕಸ್ಟಮೈಸ್ ವೀಲ್ಚೇರ್ಗಳ ವಿತರಣೆ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಮಕ್ಕಳ ...
Comments
Post a Comment