ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ -ಸಯ್ಯದ್ ಮುಜಾಹಿದ್

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಂಎಲ್ಎ  ಅಭ್ಯರ್ಥಿ -ಸಯ್ಯದ್ ಮುಜಾಹಿದ್ 


 ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು    ಸಿದ್ಧರಾಗಿರುವ ಅಭ್ಯರ್ಥಿ ಸಯ್ಯದ್ ಮುಜಾಹಿದೀನ್ ರವರು   ಸುದ್ದಿಗೋಷ್ಠಿಯನ್ನು ನಡೆಸಿದರು.               ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ  ಶಾಸಕರಾದ ಜಮೀರ್ ಅಹಮದ್ ಅವರು  ನಾಮನಿರ್ದೇಶನ ಕಾರ್ಪೊರೇಟರ್ ಆಗಿ ನನ್ನನ್ನು ನೇಮಿಸಿದ್ದಾರೆ.   ನಾನು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ  ಅಭಿವೃದ್ಧಿ ಕಾರ್ಯಗಳು ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.  ಈಗ ಶಾಸಕನಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು  ನಿರ್ಧರಿಸಿದ್ದೇನೆ ಜನತೆ ನನ್ನ ಕೈ ಹಿಡಿದರೆ ರಸ್ತೆ ಚರಂಡಿ ಸೇರಿದಂತೆ ಶಿವಾಜಿನಗರದ  ಸಮಗ್ರ ಅಭಿವೃದ್ಧಿ   ಕಾರ್ಯಗಳನ್ನು  ಮಾಡುತ್ತೇನೆ ಹಾಗೂ ಶಿವಾಜಿ ನಗರದ ಚಿತ್ರಣವನ್ನೇ  ಬದಲಿಸುತ್ತೆನೆ ಅದನ್ನು ಬದಲಿಸಬೇಕಾದರೆ ಜನತೆ ಅಲ್ಲಿನ ಶಾಸಕರನ್ನು ಬದಲಿಸಬೇಕು ಹಾಗೂ ನನಗೆ ಒಂದು ಅವಕಾಶ ನೀಡಬೇಕು. ಫೆಬ್ರವರಿ ಒಂದರಂದು ಯಾವ ಪಕ್ಷ ಸೇರುವುದು ಎಂಬುವುದರ   ಬಗ್ಗೆ ಒಂದು ಸಭೆ ನಡೆಸಲಾಯಿತು. ಆ ಸಭೆಯಲ್ಲಿ ನನ್ನ ರಾಜಕೀಯ ಗುರುಗಳು, ಹಿರಿಯರು,  ಸ್ನೇಹಿತರು, ಹಾಗೂ ಹಿತೈಷಿಗಳು  ಪಾಲ್ಗೊಂಡಿದ್ದರು ಆ ಸಭೆ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು.  ಆಗ ನನ್ನ ಗುರುಗಳು,  ಸ್ನೇಹಿತರು, ಹಾಗೂ ಹಿತೈಷಿಗಳು  ನನಗೆ ಒಂದು ಸಲಹೆ ನೀಡಿದರು ಅದು ಏನೆಂದರೆ ನೀನು ಯಾವುದಾದರೂ ಪಕ್ಷ ಸೇರುವ ಮುನ್ನ  ಜನತೆಯ  ಅಭಿಪ್ರಾಯ ಪಡೆದು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸು ಎಂದು, ಅದಕ್ಕಾಗಿ ನಾನು ಇನ್ನೂ ಹದಿನೈದು ದಿನ ಜನಾಭಿಪ್ರಾಯಗಳನ್ನು ತಿಳಿಯಲು ದೇವಸ್ಥಾನಗಳು ಮಸೀದಿಗಳು ಚರ್ಚ್ ಗಳು ಹಾಗೂ ಜನಜಂಗುಳಿ ಪ್ರದೇಶಗಳಲ್ಲಿ ಜನಾಭಿಪ್ರಾಯಗಳನ್ನು ತಿಳಿದು ಯಾವ ಪಕ್ಷ ಸೇರಬೇಕೆಂದು ನಿರ್ಧರಿಸುತ್ತೇನೆ  ಯುವಕರ, ಹಿರಿಯರ, ಜನರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆ ಶಿವಾಜಿನಗರದ ಜನತೆಯ ಆಶೀರ್ವಾದ ನನಗೆ ಇದೇ ನನ್ನನ್ನು ಖಂಡಿತ ಗೆಲ್ಲಿಸಿ ಶಾಸಕನಾಗಿ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ  ಎಂದು ಹೇಳಿದರು

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ