ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ

ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ 


         ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ನನ ಸೈಲೈನ್ ಅಪಾರ್ಟಮೆಂಟ್ ನಿವಾಸಿಗಳು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹೆಚ್. ರವೀಂದ್ರರವರು ಹಾಗೂ ಅತ್ತಿಗುಪ್ಪೆ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯರಾದ ಡಾ: ಎಸ್.ರಾಜು ಮತ್ತು ಬಿ.ಜೆ.ಪಿ. ಮುಖಂಡರಾದ ವೆಂಕಟೇಶ್ ಬಾಬಿ  ಮಹಿಳಾ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೈಲೈನ್ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದಲ್ಲಿ ಹೆಚ್. ರವೀಂದ್ರರವರು ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ವಿಶ್ವ ನಾಯಕರಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಸಮಯ ಬಂದಿದೆ. ಈ ಶುಭಾ ಸಮಯದಲ್ಲಿ ಮತದಾರರು ಬಿ.ಜೆ.ಪಿ.ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ನನ್ನುನು ಆಯ್ಕೆ ಮಾಡಿ. ವಿಜಯನಗರ ಮಾದರಿ ವಿಧಾನಸಭಾ ಕ್ಷೇತ್ರ ನಿರ್ಮಾಣಕ್ಕೆ ಮುಂದಿನ ಕಾರ್ಯಯೋಜನೆ ರೂಪಿಸಲಾಗಿದೆ, ನೀರಿನ ಸಮಸ್ಯೆಗೆ ಪರಿಹಾರ ಮತ್ತು ಪರಿಸರ, ವಿದ್ಯುತ್ ಸಮಸ್ಯೆ ಪರಿಹಾರ, ಕಸ ಮುಕ್ತ ವಿಜಯನಗರ ನಿರ್ಮಾಣ, ಪಾರ್ಕಗಳ ಅಭಿವೃದ್ದಿ  ಯೋಜನೆಗಳಿಗೆ ಚಾಲನೆ ನೀಡಲಾಗುವುದು ವಿಜಯನಗರ ಬುದ್ದಿವಂತ ಮತದಾರರು ಈ ಬಾರಿಗೆ ಬಿ.ಜೆ.ಪಿ.ಗೆ. ಮತದಾನ ಮಾಡಿ ಅಭಿವೃದ್ದಿ ಪರ ಹೋರಟಕ್ಕೆ ಬೆಂಬಲಿಸಬೇಕು ಎಂದು ಹೇಳಿದರು. 

  ತದನಂತರ ಅತ್ತಿಗುಪ್ಪೆ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಡಾ.ಎಸ್.ರಾಜುರವರು ಮಾತನಾಡಿ ಕೇಂದ್ರದಲ್ಲಿ ಬಿ.ಜೆ.ಪಿ.ಸರ್ಕಾರದ ಆಡಳಿತವಿದೆ, ರಾಜ್ಯದಲ್ಲಿ ಬಿ.ಜೆ.ಪಿ.ಸರ್ಕಾರ ಆಡಳಿತ ನಡೆಸಬೇಕು ಅದಕ್ಕೆ ಒಂದೂಂದು ಮತ ಬಹಳ ಅಮೂಲ್ಯ, ರಾಜ್ಯದಲ್ಲಿ ಬಿ.ಜೆ.ಪಿ.ಸರ್ಕಾರ ರಚನೆಯಿಂದ ಅಭಿವೃದ್ದಿ ಕಡೆ ಹೆಚ್ಚು ಗಮನ ಹರಿಸಲಾಗುವುದು. ಹೆಚ್. ರವೀಂದ್ರ ರವರು ಮಹಾನಗರ ಪಾಲಿಕೆ ಸದಸ್ಯರಾಗಿ ಉತ್ತಮ ಆಡಳಿತ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಯುವಕರಾಗಿರುವ ರವೀಂದ್ರರವರಿಗೆ ಬಹುಮತ ನೀಡಿ ಜಯಗಳಿಸಲು ಮೇ 12ತಾರೀಖು ಕಡ್ಡಾಯ ಮತದಾನ ಮಾಡಿ ಎಂದು ಕರೆ ನೀಡಿದರು .

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ