ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ

ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ 

ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ


ಬೆಂಗಳೂರು ಗ್ರಾಮಾಂತರ : ಆನೇಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್  ರವರು  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿ. ಅವರ ಭಾವಚಿತ್ರ ಇಡಿದು  ಮತವನ್ನು ಕೇಳಿದ್ದೇವೆ. ಕ್ಷೇತ್ರದ ಜನರು ಹೆಚ್ಚಿನ ಬಹುಮತವನ್ನು ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಸ್ಥಳೀಯ ಶಾಸಕರು ಅಬಕಾರಿ ಸಚಿವರಾದ ಕೆ ಗೋಪಾಲಯ್ಯರವರು ಮನವಿ ಮಾಡಿದರು.

       ಬೆಂಗಳೂರು ಗ್ರಾಮಾಂತರ ಆನೇಕಲ್ ತಾಲೂಕಿನಲ್ಲಿ ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು. ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ  ಪ್ರಬಲವಾದ ಸಮುದಾಯ. ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಕಟ್ಟಿರುವಂತಹ ಇತಿಹಾಸವನ್ನು ಸೂರ್ಯ ಹಾಗೂ ಚಂದ್ರ ಇರುವವರೆಗೂ ಸಾಧ್ಯವಿಲ್ಲ ಎಂದರು.

         


      ಪ್ರತಿನಿತ್ಯ ನಾಡಪ್ರಭು ಕೆಂಪೇಗೌಡರನ್ನು  ನಾವೆಲ್ಲರೂ ಪ್ರತಿನಿತ್ಯ ಪೂಜೆ ಮಾಡಬೇಕು ಒಕ್ಕಲಿಗ ಸಮುದಾಯ ಒಂದು ಜಾತಿಗೆ ಸೀಮಿತವಾಗದೆ ಸಹಾಯ ಮಾಡುವುದಿಲ್ಲ.  ಕಷ್ಟಪಟ್ಟು ದುಡಿಯುವುದು ನಾವೆಲ್ಲರೂ ರೈತ ಕುಟುಂಬದವರು ಎಂದರು.

           ಅನೇಕ ಸಮುದಾಯಗಳಿಗೆ ಆಶ್ರಯವನ್ನು ಕೊಟ್ಟು ಇವತ್ತು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ರವರು ವಿಧಾನಸೌಧವನ್ನು ಕಟ್ಟಿದ್ದ ಮಹಾನ್ ವ್ಯಕ್ತಿ ಎಂದರು.


        ಪ್ರಬಲವಾದ ಶಕ್ತಿ ಆನೇಕಲ್ ನಲ್ಲಿದೆ. ಜನತಾ ಪಕ್ಷ ಸರ್ಕಾರ ಏರ್ಪೋರ್ಟ್ ಗೆ ಹೆಸರು ಇಡುವಂತಹ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡುವಂತಹ ಕೆಲಸವನ್ನು ಮಾಡಿದ್ದೇವೆ.  ಕೆಂಪೇಗೌಡರ ಪ್ರತಿಮೆಯನ್ನು ಏರ್ಪೋರ್ಟ್ ನ ಮುಂಭಾಗ ಮಾಡಲೇಬೇಕು ಎಂದು ಒತ್ತಾಯಿಸಿದ್ದೇವು ಎಂದರು.

       ಆನೇಕಲ್ ತಾಲೂಕಿನಲ್ಲಿ ಸಮುದಾಯದ ಜೊತೆಗೆ ಅಕ್ಕಪಕ್ಕದ ಇನ್ನಿತರ ಸಮುದಾಯಗಳ ಜೊತೆಗೆ ಅವರ ವಿಶ್ವಾಸವನ್ನು  ಗಳಿಸಿದ್ದೇವೆ. ಪಕ್ಷಗಳಲ್ಲಿ ಭಾರತೀಯ ಜನತಾ ಪಕ್ಷ ವೂ ಕೂಡ ಒಂದಾಗಿದೆ ಎಂದರು.


      ಇದೇ ಸಂದರ್ಭದಲ್ಲಿ ಆನೆಕಲ್ ತಾಲೂಕಿನ ಒಕ್ಕಲಿಗ ಸಮುದಾಯದ ಹಿರಿಯರಾದ ಕುಮಾರಸ್ವಾಮಿ, ಮಂಡಲದ ಅಧ್ಯಕ್ಷರಾದ ಪುಟ್ಟರಾಜು ಗೌಡ, ಸತೀಶ್, ಜಿಲ್ಲಾ ಕಾರ್ಯದರ್ಶಿಗಳಾದ ರಾಧಾಕೃಷ್ಣ ಶಂಕರ್, ಎಸ್ ಅಶ್ವತಿ, ಭಾಗ್ಯಮ್ಮ, ಶ್ರೀನಿವಾಸ್ ಗೌಡ, ರಾಮಕೃಷ್ಣಯ್ಯ, ಕೋದಂಡರಾಮ, ರಾಜೇಂದ್ರಪ್ಪ, ಪಕ್ಷದ ಅಭ್ಯರ್ಥಿಗಳಾದ ಹುಲ್ಲಹಳ್ಳಿ ಶ್ರೀನಿವಾಸ್ ಹಾಗೂ ಸೇರಿದಂತೆ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ