Posts

ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರ “ಡೈನಾಮಿಕ್ ಹೀರೋ” :: ಸಮೀವುಲ್ಲಾ

Image
ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರ “ಡೈನಾಮಿಕ್ ಹೀರೋ” ::  ಸಮೀವುಲ್ಲಾ ಗುರುಪ್ಪನಪಾಳ್ಯ ಬ್ಲಾಕ್ ಕಾಂಗ್ರೆಸ್ಸಿನಿಂದ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ವಿಧಿ ಸಮಾರಂಭ             ಬೆಂಗಳೂರು; ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರರೂಪದ ಡೈನಾಮಿಕ್ ಹೀರೋ ಎಂದು ಬಿಟಿಎಂ ಲೇಔಟ್‍ನ ಗುರುಪ್ಪನಪಾಳ್ಯದ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಮೀವುಲ್ಲಾ ಬಣ್ಣಿಸಿದ್ದಾರೆ.     ಗುರುಪ್ಪನ ಪಾಳ್ಯದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಅಧ್ಯಕ್ಷರ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರತಿಜ್ಞಾ ವಿಧಿ ಸಮಾರಂಭವನ್ನು ವೀಕ್ಷಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಸುದೀರ್ಘ ಕೊಡುಗೆ ನೀಡಿದ್ದಾರೆ. ಅವರು ಕೇವಲ ಕನಕಪುರದ ಬಂಡೆಯಲ್ಲ ಬಂಡೆಯೊಳಗಿನ ವಜ್ರ ಅಂದರೆ ಡೈನಾಮಿಕ್ ವ್ಯಕ್ತಿತ್ವ ಹೊಂದಿರುವ ಅಪರೂಪದ ರಾಜಕಾರಣಿ ಮುಂಬರುವ ದಿನಗಳಲ್ಲಿ ಇವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಬೇಕು ಎಂದು ಶುಭ ಹಾರೈಸಿದರು. ವಿಡಿಯೊ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  ು click here to watch this video       ಬಿಟಿಎಂ ಲೇಔಟ್ ಕ್ಷೇತ್ರದ ಜನಪ್ರಿಯ ಶಾಸಕರು ಕಾಂಗ್ರ

ಎಂ ಲಕ್ಷ್ಮೀನಾರಾಯಣ್ ಅವರ 61ನೇ ಹುಟ್ಟುಹಬ್ಬ ಆಚರಣೆ

Image
  ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ   ಬೆಂಗಳೂರು: ಮಾಜಿ  ಉಪ ಮಹಾಪೌರರಾದ ಎಂ. ಲಕ್ಷ್ಮೀನಾರಾಯಣ್ ಅವರ 61ನೇ ಹುಟ್ಟುಹಬ್ಬದ ಪ್ರಯುಕ್ತ ಎಂ. ಲಕ್ಷ್ಮೀನಾರಾಯಣ್ ಅಭಿಮಾನಿಗಳ ಬಳಗದ ವತಿಯಿಂದ ದೀಪಾಂಜಲಿ ನಗರ ವಾರ್ಡ್ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು.             ಈ ಕಾರ್ಯಕ್ರಮದಲ್ಲಿ ಸ್ನೇಹಿತರು ಹಿತೈಷಿಗಳು ಅಭಿಮಾನಿಗಳು ಸೇರಿದಂತೆ ಹಲವು ಗಣ್ಯರು  ಹುಟ್ಟುಹಬ್ಬದ ಶುಭಾಶಯ ಕೋರಿದರು.  ಈ ಸಂದರ್ಭದಲ್ಲಿ  ಎಂ. ಲಕ್ಷ್ಮಿನಾರಾಯಣ್  ರವರು ಮಾತನಾಡಿ ಜನಪ್ರತಿನಿಧಿಗಳು ಜನಸೇವಕರಾಗಿ ಕೆಲಸ ಮಾಡಬೇಕು. ದೀಪಾಂಜಲಿ ನಗರ  ವಾರ್ಡ್ ನಲ್ಲಿ   ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುನ ವಾರ್ಡ್ಗಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೀಪಾಂಜಲಿ ನಗರ  ವಾರ್ಡ್ ಸಮಗ್ರ ಅಭಿವೃದ್ದಿಗೆ ನಾಗರಿಕರ ಸಹಕಾರದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಆರೋಗ್ಯ ಸೇವೆ ಮತ್ತು ಮೂಲಭೂತ ಸೌಲಭ್ಯ ರಸ್ತೆ ನೀರು, ಚರಂಡಿ ವ್ಯವಸ್ತೆ, ಸಿ.ಸಿ.ಕ್ಯಾಮರ ಆಳವಡಿಕೆ. ಸಾರ್ವಜನಿಕರ ಕುಂದುಕೂರತೆ ಅಲಿಸಲು 24/7ನಲ್ಲಿ ಅನ್ ಲೈನ್ ದೂರು ಸ್ವೀಕಾರ ಮತ್ತು ಪರಿಹಾರ.       ದೀಪಾಂಜಲಿ ನಗರ  ವಾರ್ಡ್ ಸ್ವಚ್ಚತೆ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು ಎಂಬದು ನಮ್ಮ ಆಶಯ ಎಂದು ಹೇಳಿದರು. ನಂತರ ಮಾಜಿ ಉಪಮಹಾಪೌರರಾದ ಎಂ. ಲಕ್ಷ್ಮೀ ನಾರಾಯಣ  ದೀಪಾಂಜಲಿ ನಗರ ವಾರ್ಡ್ ನ  ಪೌರಕಾರ್ಮಿಕರ

ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ;

Image
ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ;  ಬೆಂಗಳೂರಿನಲ್ಲಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ      ಬೆಂಗಳೂರು-ರೋಟರಿಯನ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3190 ಇಂಟರ್ ನ್ಯಾಷನಲ್ ತನ್ನ 115ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಭಾನುವಾರ 23ರಂದು ರೋಟರಿ ಶಾಂತಿ ನಡಿಗೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಆರಂಭಗೊಳ್ಳುವ ಶಾಂತಿ ನಡಿಗೆ ಮೈಸೂರು ಬ್ಯಾಂಕ್ ವೃತ್ತವರೆಗೆ ನಡೆಯಲಿದೆ. ಬೆಳಗ್ಗೆ 7.30 ರಿಂದ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.               ರೋಟರಿ ನಂದಿನಿಯ ಅಧ್ಯಕ್ಷ ಮದುಸೂಧನ್ ಆರ್ ಬಿಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿ ಸಂದೇಶ ಸಾರಲು ಈ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 50ಕ್ಕೂ ಹೆಚ್ಚು ರೋಟರಿ ಕ್ಲಬ್‍ಗಳು ಈ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಜೊತೆಗೆ ಬಿಳಿ, ನೀಲಿ, ಹಸಿರು, ಹಳದಿ ಬಲೂನ್‍ಗಳನ್ನು  ಇದೇ ಸಂದರ್ಭದಲ್ಲಿ ಹಾರಿ ಬಿಡುವ ಮೂಲಕ  ದೇಶದಲ್ಲಿ ಶಾಂತಿ ಸೌಹಾÀರ್ದತೆ ನೆಲೆಸ ಬೇಕು ಎಂಬ ಸಂದೇಶವನ್ನು ನೀಡಲಾಗುವುದು ಎಂದು ತಿಳಿಸಿದರು.              ಬಿಳಿ, ನೀಲಿ, ಹಸಿರು, ಹಳದಿ ಬಲೂನ್ ಗಳನ್ನು ಜಿಲ್ಲಾ ರೋಟರಿ ಗವರ್ನರ್ ಡಾ. ಸಮೀರ್ ಹರಿಣಿ ಮತ್ತು ಮತ್ತಿತರ ಗಣ್ಯರು ಹಾರಿ ಬಿಡಲಿದ್ದಾರೆ ಎಂದರು.

ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ

Image
ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ        ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ ಬೆಂಗಳೂರಿನಲ್ಲಿಂದು ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾದ ಜಿ.ಹೆಚ್.ಶಂಕರ್, ಉಪಾಧ್ಯಕ್ಷರಾದ ಆದರ್ಶ ಸಂಪತ್, ಸದಸ್ಯರಾದ ಎಸ್.ಆರ್.ವೇಣು, ಎಸ್.ಕೆ. ಶ್ರೀನಿವಾಸ್, ಹೇಮಂತ್ ಕುಮಾರ್, ಡಿ.ಸಿ ಹರೀಶ್ ಮತ್ತಿತರರು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಪುಲಕೇಶಿ ನಗರ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪೌರಕಾರ್ಮಿಕರು ಹಾಗೂ ಅಲ್ಪಸಂಖ್ಯಾತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ನಿವಾರಣೆಗಾಗಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಹಾಗೂ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಚರ್ಚೆ ನಡೆಸಲಾಯಿತು.  ವಿಡಿಯೊ ನೋಡಲು ಕೆಳಗೆ ಕ್ಲಿಕ್ ಮಾಡಿ  click to watch this video      ವಿಶೇಷವಾಗಿ ಪುಲಕೇಶಿ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ಒಕ್ಕೂಟಕ್ಕೆ ಇನ್ನಷ್ಟು ಶಕ್ತಿ ತುಂಬುವ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು.

ಹಿಂದೂ ಮಹಾಸಭಾ ಸಮಾವೇಶ

Image
  ಹಿಂದೂ ಮಹಾಸಭಾ ಸಮಾವೇಶ ಸ್ವಾಮಿ ಚಕ್ರಪಾಣಿ ಮಹಾರಾಜರಿಗೆ ಅಭಿನಂದನಾ ಸಮಾರಂಭ             ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಇದೇ ಮಾರ್ಚ್ 15 ರಂದು ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಹಿಂದೂ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ತಿಳಿಸಿದ್ದಾರೆ.             ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಮಾವೇಶದಲ್ಲಿ ಹಿಂದುತ್ವವಾದಿಯಾಗಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೊಂದಿರುವ ಸ್ಥಳವನ್ನು ನ್ಯಾಯಾಲಯದ ಮೂಲಕ ಪಡೆದು ಆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ದಾವುದ್ ಅವರ ಅಹಂಗೆ ತಕ್ಕ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದಿಸಲಾಗುವುದು ಎಂದು ಹೇಳಿದರು.      ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರಧರ್ಮವನ್ನು ಕಾಪಾಡಲು ಹಾಗೂ ಹಿಂದೂ ಧರ್ಮದ ಒಗ್ಗಟ್ಟಿಗಾಗಿ ಶ್ರಮಿಸುತ್ತಿದೆ. ಯಾವುದೇ ಪ್ರತಿಫಲಾಕ್ಷಿಯಿಲ್ಲದೆ ಸಾವಿರಾರು ಕಾರ್ಯಕರ್ತರು ಪ್ರಾಮಾಣಿಕವಾಗಿ ಶಿಸ್ತಿನಿಂದ ಸಂಘಟನೆ ಮಾಡುತ್ತಿದ್ದರೂ ಕೆಲ ಅಪ್ರಾಮಾಣಿಕರು ಅಪ್ರಬುದ್ಧ ನಡವಳಿಕೆಯಿಂದ ದ್ರೋಹ ಬಗೆಯುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ, ಬೆಂಗಳೂರು ನಗರ ಅಧ್ಯಕ್ಷರಾಗಿದ್ದ ಅರುಣ್ ಪರಮೇಶ್ ರಾಜ್ ಶಿಸ್ತು ಉಲ್ಲಂಘಿಸಿ ಹಿರಿಯ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾ

ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ

Image
ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ-1 ಬಿಡುಗಡೆ   ಬೆಂಗಳೂರು: ದೇಶದ ತಂತ್ರಜ್ಞಾನ ಆಧಾರಿತ ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ (ಎಫ್‍ಎಂಇಜಿ) ಮತ್ತು ಕನ್ಸೂಮರ್ ಡ್ಯುರೇಬಲ್ ಕಂಪನಿಯಾಗಿರುವ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ದೇಶದ ಮೊದಲ ಇಂಟಲಿಜೆಂಟ್ ಫ್ಯಾನ್ ಆದ ಸ್ಮಾರ್ಟ್ ಮೋಡ್‍ನ ಕಾರ್ನೆಸಿಯಾ- I ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫ್ಯಾನ್ ಅತ್ಯಂತ ಸುಧಾರಿತ ತಂತ್ರಜ್ಞಾನ- ಐಒಟಿಯನ್ನು ಹೊಂದಿದೆ. ಗ್ರಾಹಕರಿಗೆ ಅನುಕೂಲ ಮತ್ತು ಆರಾಮದಾಯಕತೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ತಂದುಕೊಡಲಿದೆ. ಈ ಚತುರ ಫ್ಯಾನ್ ಆಕರ್ಷಕ ಬೆಲೆಯಾದ 4500 ರೂಪಾಯಿಗಳಲ್ಲಿ ಲಭ್ಯವಿದೆ.      ಈ ಹೊಸ ಫ್ಯಾನ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್‍ನ ಎಲೆಕ್ಟ್ರಿಕಲ್ ಕನ್ಸೂಮರ್ ಡ್ಯುರೇಬಲ್ಸ್‍ನ ಅಧ್ಯಕ್ಷ ರವೀಂದ್ರ ಸಿಂಗ್ ನೇಗಿ ಅವರು, ``ಹ್ಯಾವೆಲ್ಸ್ ಆವಿಷ್ಕಾರಕ, ತಂತ್ರಜ್ಞಾನ ಸುಧಾರಣೆ ಮತ್ತು ವಿನೂತನ ವೈಶಿಷ್ಟ್ಯತೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ನಮ್ಮ ಉತ್ಪನ್ನ ತತ್ತ್ವಕ್ಕೆ ಕಾರ್ನೆಸಿಯಾ- I ಒಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಚತುರ ಫ್ಯಾನ್ ತಾಪಮಾನ ಮತ್ತು ಆದ್ರ್ರತೆಯನ್ನು ಗ್ರಹಿಸಲಿದೆ. ಇದಕ್ಕೆ ತಕ್ಕಂತೆ ನಮ್ಮ ಗ್ರಾಹಕರಿಗೆ ಸರಿಯಾದ ವೇಗದಲ್ಲಿ ಗಾಳಿಯನ್ನು ನೀಡುತ್ತದೆ. ಗುಣಮಟ್ಟದ `ಸೆಗ್ಮೆಂಟ್ ಫಸ್ಟ್’ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಉದ್ಯಮದಲ್ಲಿ

ಆರೋಗ್ಯ ಕೇಂದ್ರ ಉದ್ಘಾಟನೆ

Image
ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ        ಗೋವಿಂದರಾಜನಗರ ವಾರ್ಡ್-104ರಲ್ಲಿ ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ಮು ವಸತಿ,ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ವಿ.ಸೋಮಣ್ಣರವರು ,ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ ಮತ್ತು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ,ದಾಸೇಗೌಡರು ಉದ್ಘಾಟನೆ ಮಾಡಿದರು.          ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಆರೋಗ್ಯವೆ ಭಾಗ್ಯ ,ಆರೋಗ್ಯ ಚನ್ನಾಗಿದರೆ ಕುಟುಂಬದಲ್ಲಿ ನೆಮ್ಮದ್ದಿ ಇರುತ್ತದೆ . ಇಂದು ವೈದ್ಯಕೀಯ ಚಿಕಿತ್ಯೆ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ .ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಾರ್ಡ್ನನಲ್ಲಿ  ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ..ಗರ್ಭಿಣಿ ಸ್ತ್ರೀಯರಿಗೆ  10ತಿಂಗಳ ಕಾಲ ತಪಾಸಣೆಗೆ ಮತ್ತು,ಹೆರಿಗೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಬಡವರು,ಮಧ್ಯಮ ವರ್ಗದ ಗರ್ಭಿಣಿ ಸ್ತ್ರೀ ಕುಟುಂಬಕ್ಕೆ ವೆಚ್ಚ ಬರಿಸಲು ಸಾಧ್ಯವಿಲ್ಲ ಅದ ಕಾರಣ  ಗೋವಿಂದರಾಜ ನಗರ ವಾರ್ಡ್ ನಲ್ಲಿ ಸೂಪರ್ ಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಅತ್ಯಂತ ಕಡಿಮೆ ವೆಚ್ಚದಲ್ಲ