Posts

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ

Image
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ  ವಿರುದ್ದ ನೌಕರರ ಧರಣಿ ಸತ್ಯಾಗ್ರಹ     ಬೆಂಗಳೂರು, ಜುಲೈ 09, 2018: ತಮಿಳುನಾಡು ಮೂಲಕ ಆಡಳಿತ ಮಂಡಳಿಯ ಅಧೀನದಲ್ಲಿರುವ  ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಇಂದು ನೂರಕ್ಕೂ  ಹೆಚ್ಚು ಸಿಬ್ಬಂದಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿದರು.        ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂದಿ  ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ, ಆರ್ ಆರ್ ಎಂ ಸಿ ಹೆಚ್  ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ವಹಿಸಿದ್ದರು.      ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ  ವೆಂಟಕಸ್ವಾಮಿ ಮಾತನಾಡಿ, 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಮೇಲೆ ಆಡಳಿತ ಮಂಡಳಿ  ಮೊದಲಿನಿಂದಲೂ ಕೂಡಾ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಕಾಲ ಸೇವೆ  ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಕಟ್ಟಿದ್ದೇ ತಪ್ಪಾಗಿದೆ,  ಸಂಘದ ಮುಖಂಡರುಗಳಿಗೆ ತೀವ್ರ ಕಿರುಕುಳ ನೀಡಲಾರಂಭಿಸಿದ್ದಾರೆ ಅಲ್ಲದೆ, 6 ಜನ ನೌಕರರನ್ನು  ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಪ್ಪಂದ

Image
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಪ್ಪಂದ           ತುಮಕೂರಿನ ವಸಂತ ನರಸಾಪುರದಲ್ಲಿ ರಾಜ್ಯದಲ್ಲೇ ದೊಡ್ಡ ಕೈಗಾರಿಕಾ ಹಬ್  ಒಪ್ಪಂದ   ಸಜ್ಜಾಗಿದೆ.  ಹಲವು ದಿನಗಳಿಂದ ಈ ಭಾಗದ ಕೈಗಾರಿಕಾ ಹಬ್ ಇದೀಗ ಟೇಕಾಫ್ ಆಗಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೆನ್ನೈ-ಬೆಂಗಳೂರು        ಕೈಗಾರಿಕಾ ಕಾರಿಡಾರ್ನ ಭಾಗವಾದ ತುಮಕೂರು ಕೈಗಾರಿಕಾ   ನಿರ್ಮಾಣ ಕೆಲಸಕ್ಕೆ ಮುನ್ನುಡಿ ಬರೆದಂತಾಗಿದೆ.        ರಾಜ್ಯ ಸರಕಾರ ಶೇರ್‌ಹೋಲ್ಡರ್ಸ್, ಅಗ್ರಿಮೆಂಟ್ (ಎಸ್‌ಎಚ್‌ಎ) ಹಾಗೂ ಸ್ಟೇಟ್‌ ಸಪೋರ್ಟ್‌ ಅಗ್ರಿಮೆಂಟ್ (ಎಸ್‌ಎಸ್‌ಎ) ಮಾಡಿಕೊಳ್ಳುವ ಮೂಲಕ ಕೆಲಸಕ್ಕೆ ಚಾಲನೆ ಸಿಕ್ಕಿದ್ದು. ಕೇಂದ್ರ ಸರಕಾರದ ಐದು ವಿಶೇಷ ವಾಣಿಜ್ಯ ಹಾಗೂ ಕೈಗಾರಿಕಾ ಕಾರಿಡಾರ್‌ನ ಪೈಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಕೂಡ ಒಂದು. ಉತ್ಪಾದನಾ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯೋಗ ಸೃಷ್ಟಿಸಲು ಈ ಕಾರಿಡಾರ್ ನಿರ್ಮಾಣ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ.     ಸಿಬಿಐಸಿ ಕಾರಿಡಾರ್ ಬೆಂಗಳೂರು ಹಾಗೂ ಚೆನ್ನೈ ಸಿಟಿಗಳನ್ನು ಲಿಂಕ್ ಮಾಡಲಿದ್ದು, 560 ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ಚೇತರಿಸಿಕೊಳ್ಳಲಿದೆ. ಜತೆಗೆ ಕರ್ನಾಟಕದ 16 ಜಿಲ್ಲೆ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕ

ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ

Image
ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ       ಬೆಂಗಳೂರು: ರಾಜಧಾನಿಯಲ್ಲಿ ಸಾವಯವ ಮೇಳ ಆಯೋಜಿಸಿರುವುದು  ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಇದರ ಬಗ್ಗೆ ಅರಿವು ಉಂಟಾಗಲು ಸಹಾಯಕವಾಗಲಿದೆ. ಈ ಮೇಳ ಆಯೋಜಿಸಿರುವ ಐಸಿಸಿಒಎಯ ಒಂದು ಉತ್ತಮ ಉಪಕ್ರಮ ಇದಾಗಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಶ್ಲಾಘನೆ    ವ್ಯಕ್ತಪಡಿಸಿದರು.          ಇಂಟರ್‌ನ್ಯಾಾಷನಲ್ ಕಂಪಟೆನ್‌ಸ್‌ ಸೆಂಟರ್ ಫಾರ್ ಆರ್ಗ್ಯಾನಿಕ್  ಅಗ್ರಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ  ಕೋರಮಂಗಲದಲ್ಲಿ ನಿನ್ನೆ  ಮತ್ತು ಇಂದು ನಡೆಯುತ್ತಿರುವ ಸಾವಯವ ಕೃಷಿ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಂತಹ ಸಾವಯವ ಆಹಾರ ಪದಾರ್ಥಗಳ ಮೇಳ ಆಯೋಜಿಸಿರುವುದರಿಂದ ರೈತರಿಗೆ ಲಾಭವಾಗಲಿದೆ. ಜೊತೆಗೆ ದೇಶಾದ್ಯಂತ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುವುದರಿಂದ  ಹೆಚ್ಚಿನ ಲಾಭ  ರೈತರಿಗೆ ದೊರೆಯಲಿದೆ ಎಂದು ಹೇಳಿದರು.          ಕರ್ನಾಟಕ ಸಾವಯವ ಆಹಾರ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹೀಗಾಗಿ ಸಾವಯವ ಆಹಾರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಸಾವಯವ ಬೆಳೆ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸಾವಯವ ಪದಾರ್ಥಗಳನ್ನು ಜನರಿಗೆ ಪರಿಚಯಿಸಲು ಈ ಮೇಳ ಆಯೋಜಿಸಿದ್ದು, ನಗರಾದ್ಯಂತ ಜನರು ಆಗಮಿಸಿ ಈ ಮೇಳ ಯಶಸ್ವಿಗೊಳಿಸಬೇಕು  ಎಂದರು.        ಈ ಮೇಳದಲ್ಲಿ ಸಾವಯವ ರೀಲೆಟರ್‌ಗಳು ಭಾಗಿಯಾಗಲಿದ್ದು, ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲಾಗುತ್ತದೆ.

ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ

Image
 ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ       ಬಿ.ಎಸ್. ಪಾಟೀಲ್ ರವರ  ತಂಡ ಸರಕಾರಕ್ಕೆ  ಸಲ್ಲಿಸಿರುವ  ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ  ಪದ್ಮನಾಭರೆಡ್ಡಿ   ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ  ಬಿ.ಎಸ್. ಪಾಟೀಲ್  ವರದಿಯ ಮೇಲೆ  ಮಾತನಾಡತ್ತ. ಯಾವುದೇ  ಕಾರಣಕ್ಕೆ  ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ  ಬಿ.ಎಸ್ ಪಾಟೀಲ್ ವರದಿಯನ್ನು  ಒಟ್ಟಾಗಿ  ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ   ಅಭಿಪ್ರಾಯ  ಪಡೆದುಕೊಳ್ಳದೆ ವರದಿ ನೀಡಲಾಗಿದೆ  ಎಂದು ಅಸಮಾದಾನ ವ್ಯಕ್ತಪಡಿಸಿದರು.        ಪದ್ಮನಾಭರೆಡ್ಡಿ ಯವರ ಮಾತಿಗೆ  ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್  ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು.     ನಂತರ ಮಾತನಾಡಿದ ಶಾಸಕರುಗಳಾದ ಭೈರತಿ ಸುರೇಶ್ ಮುನಿರತ್ನ ನಾಯ್ಡು ಮತ್ತು  ಎಸ್ ಟಿ ಸೋಮಶೇಖರ್ ಕಸದ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟ್ರಾಕ್ಟರ್ ಗಳಿಗೆ ನೇರವಾಗಿ ಹಣ ಜಮೆ ಮಾಡುವ ಬದ
Image
ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ     ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್. ಮಹದೇವಸ್ವಾಮಿ  ಘನ  ಸರ್ಕಾರವು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ದಿನಾಂಕ 29/06/2017 ರಂದು ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ವಿಷಯವಾಗಿ  ವಿಶೇಷ ರಾಜ್ಯಪತ್ರ ಹೊರಡಿಸಿದ್ದು ಈ ಆದೇಶದಂತೆ ಮೀಸಲಾತಿ ನೀಡದೆ ಕಾವೇರಿ ನೀರಾವರಿ ನಿಗಮ ನರಸೀಪುರ ಹೆಚ್ ಆರ್ ಬಿ ಆರ್  ವಿಭಾಗದಲ್ಲಿ ಟೆಂಡರ್ ಕರೆದಿದ್ದಾರೆ . ನರಸಿಪುರ ತಾಲ್ಲೂಕಿನ ಎಸ್ಸಿ /ಎಸ್ಟಿ  ಬಂಧುಗಳು ರೂ ಐವತ್ತು ಲಕ್ಷಗಳ ವರೆಗೆ ಮೀಸಲಾತಿ ಇರುವುದರಿಂದ ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಐವತ್ತು ಲಕ್ಷಗಳ ಮೇಲಿನ ಅಂದಾಜು ವೆಚ್ಚ ಬರುವ ಹಾಗೆ ತಯಾರಿಸಿ ಪ್ಯಾಕೇಜ್ ಟೆಂಡರ್ ಕರೆದಿದ್ದು ರದ್ದು ಮಾಡಿ ಸರ್ಕಾರಿ ಆದೇಶದಂತೆ ಮೀಸಲಾತಿ ನೀಡಿ ಟೆಂಡರ್ ಕರೆಯ ಬೇಕೆಂದು ಮನವಿ ಮಾಡಿರುತ್ತಾರೆ ಈ ವಿಷಯವಾಗಿ ಹೊಳೆನರಸೀಪುರ ತಾಲ್ಲೂಕಿನ ಸಿಎಸ್ಟಿ ಗುತ್ತಿಗೆದಾರರು ಐದು ದಿನಗಳ ಧರಣಿ ಕೂಡ ಮಾಡಿರುತ್ತಾರೆ     ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರಾದ ಎಂ. ಪುಟ್ಟರಾಜು ಅವರು ಟೆಂಡರನ್ನು ರದ್ದು ಮಾಡುವುದಾಗಿ ಹೇಳಿ ರದ್ದು  ಮಾಡದೆ ಟೆಂಡರ್ ಅನ್ನು ಮುಂದುವರಿಸಿರುತ್ತಾ

ಮಹೇಂದ್ರ ಮುನೋತ್ ಅವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ

Image
   ಮಹೇಂದ್ರ ಮುನೋತ್ ಅವರ    51ನೇ ವರ್ಷದ ಹುಟ್ಟುಹಬ್ಬ ಆಚರಣೆ         ಬಾಲಾಜಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ   ಮುನೋತ್ ಅವರ  51ನೇ ಹುಟ್ಟುಹಬ್ಬದ ಆಚರಣೆಯನ್ನು ವಿಜಯನಗರದ ಬಾಲಾಜಿ ಮೆಡಿಕಲ್ಸ್ ಸಮೀಪದಲ್ಲಿ  ಮಹೇಂದ್ರ  ಅಭಿಮಾನಿಗಳು ಆಚರಿಸಿದರು.    ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹೇಂದ್ರ  ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ವಿತರಿಸಿದರು.     ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಆನಂದ್ ಹೊಸೂರು, ಶಿವರಾಮೇಗೌಡ, ಜಿಮ್ ನವೀನ, ನಾಗರಿಕರು ಹಾಗೂ ಅಭಿಮಾನಿಗಳು ಶುಭ ಕೋರಿದರು         ನಂತರ ಮಾತನಾಡಿದ ಮಹೇಂದ್ರ  ಕರ್ನಾಟಕದ ಜನತೆ ನಾಡ ಪ್ರೇಮಿಗಳು ದೇಶಪ್ರೇಮಿಗಳು ಹೃದಯ ಶ್ರೀಮಂತರು ಎಲ್ಲರಿಗೂ ನನ್ನ  ಹೃದಯ ಪೂರ್ವಕ ನಮಸ್ಕಾರಗಳು ಯಾವ ಮನುಷ್ಯ ತನಗಾಗಿ ಬದುಕುತನೊ ಅವನ ಜೀವನ ವ್ಯರ್ಥ ನಿಜವಾದ ಜೀವನ ಅಂದರೆ ಅವರಶಕ್ತಿಯನ್ನು ನಿಶ್ಶಕ್ತಿ ಒಂದ ವ್ಯಕ್ತಿಗಳಿಗೆ ಸದುಪಯೋಗ  ಮಾಡುತ್ತಾರೆ.  ಸೇವೆಯೂ ಬರೀ  ಪ್ರದರ್ಶನವಾಗಬಾರದು ಸೇವೆ ಮಾನವನ ಕರ್ತವ್ಯವಾಗಬೇಕು ನನಗೆ ಯಾವ  ಸ್ವಾರ್ಥ ಇಲ್ಲ ನನ್ನಲ್ಲಿ ಒಂದೇ ಒಂದು ಸ್ವಾರ್ಥ  ಅಂದರೆ ಎಲ್ಲರ ಹೃದಯದಲ್ಲಿ ನನ್ನ ಸ್ಥಾನವನ್ನು ಬಯಸುತ್ತೇನೆ.  ಇಟ್ಟಿಗೆ ಸಿಮೆಂಟ್ನಿಂದ ಬಂಗಲೆ ಕಟ್ಟಬಹುದು ಆದರೆ  ನನ್ನ ಮನೆಯನ್ನು ನಿಮ್ಮ ವಿಶಾಲವಾದ  ಹೃದಯದಲ್ಲಿ ಕಟ್ಟಲು ಬಯಸುತ್ತೇನೆ.        ನನಗೆ ನನ್ನ ಹುಟ್ಟ

ಸರ್ವಜನ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Image
ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಪ್ರತಿಭಟನೆ      ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಸರ್ವಜನ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರಿಂದ   ದೊಡ್ಡಕಲ್ಲಸಂದ್ರದ ರುದ್ರಭೂಮಿಯ ಮುಂದೆ ಪ್ರತಿಭಟನೆ  ಮಾಡಲಾಯಿತು.       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಉತ್ತರಹಳ್ಳಿ  ಕೆ.ಎನ್. ಮೂರ್ತಿ  ಈ ರುದ್ರಭೂಮಿಯೂ ಸುಮಾರು 100 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಸುತ್ತಮುತ್ತಲಿನ ಪ್ರದೇಶದ ದಲಿತರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಂಗಳವಾರ ಕೆಲವು ಕಿಡಿಗೇಡಿಗಳು ರಿಯಲ್ ಎಸ್ಟೇಟ್ ಮಾಡುವ ಸಲುವಾಗಿ ಹಾಗೂ  ಭೂ ಕಬಳಿಸಲು ರುದ್ರಭೂಮಿಯನ್ನು ತೆರವುಗೊಳಿಸಿ ಸಮತಟ್ಟು ಮಾಡಿದ್ದಾರೆ.         ಇದರ ಬಗ್ಗೆ  ತಹಸೀಲ್ದಾರ್ ಬಳಿ ದೂರನ್ನು ನೀಡಿದ್ದೇವೆ. ಅವರು ಇದರ ದಾಖಲಾತಿಗಳನ್ನು ಶೀಘ್ರವೇ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ರುದ್ರಭೂಮಿಯ ಪುನರ್ ನಿರ್ಮಾಣವಾಗುವವರೆಗೂ ಹಾಗೂ ಕಿಡಿಗೇಡಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.               ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಗೌಡ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು